Advertisement

ಕಂಬಳ ಸಾಧಕ ಶ್ರೀನಿವಾಸ್ ಗೌಡರಿಗೆ ಡಾ. ವೀರೇಂದ್ರ ಹೆಗ್ಗಡೆ ಸಮ್ಮಾನ

02:01 PM Feb 24, 2020 | keerthan |

ಬೆಳ್ತಂಗಡಿ: ಕಂಬಳ ಓಟಗಾರ ಶ್ರೀನಿವಾಸ್ ಗೌಡ ಅವರು ಸೋಮವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Advertisement

ಕಂಬಳ ಕ್ರೀಡೆಯಲ್ಲಿ ಸಾಧನೆಗೈಯುವ ಮೂಲಕ ಗ್ರಾಮೀಣ ಕ್ರೀಡೆಯನ್ನು ವಿಶ್ವವ್ಯಾಪಿಯಾಗಿಸಿರುವ ಕುರಿತು ಡಾ. ಹೆಗ್ಗಡೆ ಮಚ್ಚುಗೆ ವ್ಯಕ್ತಪಡಿಸಿದರು.

ಕಂಬಳ ಓಟ ತರಬೇತಿ ಹಿನ್ನಲೆ ಕುರಿತು ಕಂಬಳ ಅಕಾಡೆಮಿ ಸದಸ್ಯ ಗುಣಪಾಲ್ ಜೈನ್ ಕಡಂಬ ವಿವರಿಸಿದರು.

ಕಂಬಳದಲ್ಲಿ ಇನ್ನಷ್ಟು ಸಾಧನೆಗಳು ಹೊರಹೊಮ್ಮಲಿ ಎಂದು ಡಾ. ವೀರೇಂದ್ರ ಹೆಗ್ಗಡೆಯವರು ಶುಭಹಾರೈಸಿದರು.

Advertisement

ಈ ವೇಳೆ ಮಾಜಿ ಶಾಸಕ ಅಭಯಚಂದ್ರ ಜೈನ್, ಇರುವೈಲು-ಪಾಣಿಲ ಕೋಣದ ಯಜಮಾನ ಸತೀಶ್ಚಂದ್ರ, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಕಲ್ಲಬೆಟ್ಟು ವ್ಯ.ಸೇ. ಸ. ಸಂಘ ನಿರ್ದೇಶಕ ಚಿಂತನ್ ಲೋಬೋ, ಕಂಬಳ ಅಕಾಡೆಮಿ ನಿರ್ದೇಶಕರಾದ ಜ್ವಾಲ ಪ್ರಸಾದ್, ಸುಭಾಶ್ಚಂದ್ರ ಚೌಟ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾ ತರಬೇತುದಾರ ದಿನೇಶ್ ಅಳಿಯೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next