Advertisement

ಕಮಲಶಿಲೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಟೂರಿಸ್ಟ್‌ ಬಸ್‌: ಹಲವರಿಗೆ ಗಾಯ

09:30 PM Jan 16, 2021 | Team Udayavani |

ಸಿದ್ದಾಪುರ: ಅರೆಶಿರೂರುನಿಂದ ಕಮಲಶಿಲೆ ಮಾರ್ಗವಾಗಿ ಹೊಸಂಗಡಿ ಕಡೆಗೆ ಹೋಗುತ್ತಿರುವ ಮಿನಿ ಟೂರಿಸ್ಟ್‌ ಬಸ್‌ ಜ.16ರಂದು ಕಮಲಶಿಲೆ ಪಾರಿಯ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಜರಗಿದೆ.

Advertisement

ಅರೆಶಿರೂರುನಲ್ಲಿ ಮದುವೆ ಮುಗಿಸಿಕೊಂಡು, ಹೊಸಂಗಡಿ ಕಡೆಗೆ ಬರುತ್ತಿರುವಾಗ ಈ ಘಟನೆ ನಡೆದಿದೆ. ಕಮಲಶಿಲೆ ಪಾರಿಯ ಇಳಿಜಾರು ರಸ್ತೆಯಲ್ಲಿ ಬಸ್‌ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್‌ ಚರಂಡಿಗೆ ಉರುಳಿದೆ. ಬಸ್‌ನಲ್ಲಿದ್ದ 15 ಮಂದಿ ಪ್ರಯಾಣಿಕರಲ್ಲಿ 8 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಪ್ರಯಾಣಿಕರಲ್ಲಿ ಹೆಚ್ಚು ಗಂಭೀರವಾಗಿ ಗಾಯಗೊಂಡ ಇಬ್ಬರು ಕುಂದಾಪುರ ಖಾಸಗಿ ಆಸ್ಪತ್ರೆ ಹಾಗೂ 4 ಮಂದಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೂಳಿದವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ:ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್‌ :ಪತ್ನಿಯಿಂದ ಠಾಣೆಗೆ ದೂರು

ಅಪಘಾತ ಸ್ಥಳ: ಕಮಲಶಿಲೆ ಕೊಲ್ಲೂರು ರಸ್ತೆಯಾದ ಹಳ್ಳಿಹೊಳೆ ಪಾರಿ ರಸ್ತೆಯು ತುಂಬಾ ಕಿರಿದಾದ ಹಾಗೂ ಇಳಿಜಾರುನಿಂದ ಕೂಡಿದ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರೂ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಆಗಾಗ ಅಪಘಾತಗಳು ನಡೆಯುತ್ತಿದ್ದರೂ, ರಸ್ತೆ ಮಾತ್ರ ಅಗಲಿಕರಣಗೊಂಡಿಲ್ಲ. ಈ ರಸ್ತೆ ಇಂದಿಗೂ ಓಬೆರಾಯನ ಕಾಲದ ರಸ್ತೆಯಾಗಿಯೇ ಉಳಿದಿದೆ. ರಸ್ತೆ ಅಗಲಿಕರಣಕ್ಕೆ ಅರಣ್ಯ ಇಲಾಖೆಯ ಆಕ್ಷೇಪವು ಇದೆ. ಜತೆಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷವು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next