Advertisement

ಸಮಸ್ಯೆ ಇರುವಲ್ಲಿ ಟ್ಯಾಂಕರ್‌ ನೀರು ಪೂರೈಕೆ

05:21 PM May 13, 2019 | Naveen |

ಕಮಲನಗರ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬರ ಪರಿ ನಿರ್ವಹಣೆ ಯೋಜನೆಯಡಿ ಪಟ್ಟಣದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ ಕದಂ ಹೇಳಿದರು.

Advertisement

ಪಟ್ಟಣದ ನಾಗೋಬಾ ಮಂದಿರ, ಪಠಾಣ ಗಲ್ಲಿ, ಗಡಿ ಗಲ್ಲಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ನೀರಿನ ತೀವ್ರ ಸಮಸ್ಯೆ ಇದ್ದ ಕಡೆ ಬಾಲೂರ್‌(ಕೆ) ಗ್ರಾಮದಿಂದ ಪೈಪ್‌ಲೈನ್‌ ಮೂಲಕ ಕಮಲನಗರದ ಅತಿಥಿ ಗೃಹದ ಎದುರಿನ ಬಾವಿಗೆ ನೀರು ತುಂಬಿಸಿ ಅಲ್ಲಿಂದ ಪುನಃ ನೀರನ್ನು ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಖಂಡ ಶಾಂತಕುಮಾರ ಮಾತನಾಡಿ, ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಯುವಕರು ಸೇರಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿದ್ದಕ್ಕಾಗಿ ತಾಲೂಕು ಆಡಳಿತದಿಂದ ಟೆಂಡರ್‌ ಕರೆದು ಪ್ರತಿದಿನ 6 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಬಿರಾದಾರ, ಪಿಡಿಒ ಸುಭಾಷ ಫುಲೆ, ಸಂತೋಷ ಕದಂ, ಸುರೇಶ ಚಾಂಗುಣೆ, ವಾರ್ಡ್‌ನ ನಿವಾಸಿ ಸಂಗೀತಾ, ಸುಜಾತಾ ಹಾಗೂ ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next