Advertisement

ಕಮಲ್‌ ಪ್ರಕರಣ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

01:19 AM Nov 03, 2020 | mahesh |

ಹೊಸದಿಲ್ಲಿ: ಮಧ್ಯಪ್ರದೇಶ ಉಪಚುನಾವಣೆಗಳಲ್ಲಿ ಮಾಜಿ ಸಿಎಂ ಕಮಲ್‌ನಾಥ್‌ಗೆ ನೀಡಲಾಗಿದ್ದ “ತಾರಾ ಪ್ರಚಾರಕ’ ಮಾನ್ಯತೆ ರದ್ದುಪಡಿಸಿದ ಚುನಾವಣ ಆಯೋಗದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ದೆ ನೇತೃತ್ವದ ನ್ಯಾಯಪೀಠ ಮಾಜಿ ಸಿಎಂ ಪರ ವಕೀಲರು ಸಲ್ಲಿಸಿದ ಅರ್ಜಿಯನ್ನು ಸೋಮವಾರ ಪರಿಶೀಲಿ ಸಿತು. ತಾರಾ ಪ್ರಚಾರಕರಿಗಾಗಿಯೇ ಪ್ರತ್ಯೇಕ ನಿಯಮಗಳನ್ನು ರಚಿಸಬೇಕು ಎಂದು ಮಾಜಿ ಸಿಎಂ ಕೋರಿದ್ದರು.

ಚುನಾವಣ ಆಯೋಗದ ಪರ ವಕೀಲರು ವಾದ ಮಂಡಿಸಿ, ಉಪ ಚುನಾವಣೆ ಪ್ರಚಾರ ಮುಕ್ತಾಯ ವಾದ್ದ ರಿಂದ ಕಾಂಗ್ರೆಸ್‌ ನಾಯಕ ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ಇಲ್ಲ ಎಂದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠವು, ನಾವು ಚುನಾವಣ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡುತ್ತಿದ್ದೇವೆ. ರಾಜಕೀಯ ಪಕ್ಷವೊಂದರ ನಾಯಕ ಯಾರು ಎಂದು ನಿರ್ಣಯಿಸಲು ನಿಮಗೆ ಎಲ್ಲಿಂದ ಅಧಿಕಾರ ಬಂತು? ತಾರಾ ಪ್ರಚಾರಕರು ಯಾರು ಎಂದು ನಿರ್ಣಯಿಸುವ ಅಧಿಕಾರ ಇರುವುದು ನಿಮಗೋ ಅಥವಾ ನಿಗದಿತ ಪಕ್ಷಕ್ಕೋ ಎಂದು ಪ್ರಶ್ನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next