Advertisement

ಕಲ್ಯಾ-ಕಲ್ಕಾರ್‌ ಸೇತುವೆ ಸಂಚಾರಕ್ಕೆ ಮುಕ್ತ

10:43 PM Jun 17, 2019 | Team Udayavani |

ಪಳ್ಳಿ: ಕಲ್ಯಾ ಗ್ರಾ.ಪಂ. ವ್ಯಾಪ್ತಿಯ ಕಲ್ಕಾರ್‌ ಸೇತುವೆ ಕಾಮಗಾರಿಯ ಪೂರ್ಣಗೊಂಡಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಶಾಸಕ ಸುನಿಲ್‌ ಕುಮಾರ್‌ ಅವರು ಸೇತುವೆ ಹಾಗೂ ರಸ್ತೆ ಅಭಿವೃದ್ಧಿಗಾಗಿ 2.5 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದರು.

Advertisement

ಸೇತುವೆ ನಿರ್ಮಾಣದಿಂದಾಗಿ ಕಲ್ಯಾ ಹಾಳೆಕಟ್ಟೆ ಗ್ರಾಮಸ್ಥರು ಪಳ್ಳಿ ಕುಂಟಾಡಿ ಭಾಗವನ್ನು ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಈ ರಸ್ತೆ ಮೂಲಕ ನಿಟ್ಟೆ ಆಸುಪಾಸಿನ ಗ್ರಾಮಸ್ಥರಿಗೆ ಉಡುಪಿಯನ್ನು ಸಂಪರ್ಕಿಸಬಹುದಾಗಿದೆ.

ಸ್ಥಳೀಯರ ಹರ್ಷ
ಕಳೆದ ಮಳೆಗಾಲ ಸಂದರ್ಭ ಸೇತುವೆ ಕಾಮಗಾರಿ ಪ್ರಾರಂಭಿಸಲಾಗಿದ್ದು ಆ ವೇಳೆ ರಸ್ತೆ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ಇದೀಗ ಮಳೆಗಾಲ ಪ್ರಾರಂಭಕ್ಕೆ ಮುಂಚಿತವಾಗಿಯೇ ಗುತ್ತಿಗೆದಾರರು ಕಾಮಗಾರಿ ಮುಗಿಸಿರುವುದರಿಂದ ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next