Advertisement

Chikkamagaluru: ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ

04:49 PM Jul 19, 2024 | Team Udayavani |

ಚಿಕ್ಕಮಗಳೂರು: ಕಾಫಿನಾಡು ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿರೋ ಕಲ್ಲತ್ತಿಗರಿ ಜಲಪಾತ ಮೈದುಂಬಿ ಹರಿಯುತ್ತಿದೆ.

Advertisement

ಕಳೆದ ವಾರ ಸಾಧಾರಣವಾಗಿದ್ದ ಜಲಪಾತದಲ್ಲಿ ನೀರಿನ ಪ್ರಮಾಣ ನಾಲ್ಕೈದು ದಿನಗಳಿಂದ ಮಳೆಯ ಅಬ್ಬರ ಜೋರಾಗುತ್ತಿದ್ದಂತೆ ಕಲ್ಲತ್ತಿಗರಿ ಜಲಪಾತ ಮೈದುಂಬಿ ರಾಕ್ಷಸ ಸ್ವರೂಪ ಪಡೆದುಕೊಂಡಿದೆ.

ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದ್ದು ಜಲಪಾತದ ಬಳಿ ಜನ ನಿಲ್ಲಲೂ ಹೆದರುವಂತಿದೆ.

ಇದನ್ನೂ ಓದಿ: ಬಯಲಾಯ್ತು ವಂಚನೆ.. ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಪ್ರಕರಣ ದಾಖಲಿಸಿದ UPSC

Advertisement

Udayavani is now on Telegram. Click here to join our channel and stay updated with the latest news.

Next