Advertisement

ಅರಿಕ್ಕಾಡಿ ಪಾರೆಸ್ಥಾನ : ಕಳಿಯಾಟ ಮಹೋತ್ಸವ ಆರಂಭ

03:00 PM Apr 01, 2017 | Team Udayavani |

ಕುಂಬಳೆ : ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ ಪಾರೆಸ್ಥಾನ, ಅರಿಕ್ಕಾಡಿ ಇಲ್ಲಿನ ವಾರ್ಷಿಕ ಕಳಿಯಾಟ ಮಹೋತ್ಸವ ಮಾ. 30ರಂದು ಆರಂಭಗೊಂಡಿತು.

Advertisement

ಗುರುವಾರ ಸಂಜೆ ಚಪ್ಪರ ಮುಹೂರ್ತ, ದೀಪ ಪ್ರತಿಷ್ಠೆ,ರಾತ್ರಿ ಭಂಡಾರ ಮನೆ ಯಿಂದ ಅಚ್ಚನ್ಮಾರರು, ಗುರಿ ಕಾರರು ಮತ್ತು ನಾಲ್ಕು ಊರ್ಯ (ಕುಂಬಳೆ, ಕಾರ್ಲೆ, ಬಂಬ್ರಾಣ ಮತ್ತು ನಾಲ್ಕು ಇಚ್ಚಿಲಂಪಾಡಿ) ನೂರು ವಿಲ್ಲು ತೀಯಾ ಸಮುದಾಯದೊಂದಿಗೆ ಉತ್ಸವ ಮೂರ್ತಿ, ತಿರುವಾಯುಧ, ಧ್ವಜ, ಛತ್ರ ಚಾಮರಗಳೊಂದಿಗೆ ವಾದ್ಯ ಘೋಷ ದಲ್ಲಿ ಕ್ಷೇತ್ರಕ್ಕೆ ಭಂಡಾರ ಆಗಮಿಸಿತು.

ಶುಕ್ರವಾರ ಬೆಳಗ್ಗೆ ಭಗವತೀ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ ಬಲಿ, ಬಿಂಬ ದರ್ಶನದ ಬಳಿಕ ಧ್ವಜಾರೋಹಣ ಮಾಡಲಾಯಿತು. ಸಂಜೆ ಭಜನೆ, ರಾತ್ರಿಪುಳ್ಳಿ ಪೂವಣ್ಣ ದೈವದ ವೆಳ್ಳಾಟ್ಟಂ, ಅಣಙ…ಭೂತಂ, ಪುಳ್ಳಿ ಪೂವಣ್ಣ ದೈವದ ಕೋಲ, ಬಿಲ್ಲಾಪುರತ್‌ ಭಗವತಿ ದೈವನೇಮ ಜರಗಿತು. ಉತ್ಸವವು ಎ.6ರ ತನಕ ಜರಗಲಿರುವುದು.

Advertisement

Udayavani is now on Telegram. Click here to join our channel and stay updated with the latest news.

Next