Advertisement

Kalburgi: ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ

10:23 AM Dec 21, 2023 | Team Udayavani |

ಕಲಬುರಗಿ: ಅಫಜಲಪುರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲ್ಲಾಬಾದ ಕಡೆಗೆ ಹೋಗುತ್ತಿದ್ದ ಕಮಾಂಡರ್ ಜೀಪ್ ಮತ್ತು ಲಾರಿ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಡಿ.20ರ ಬುಧವಾರ ತಡರಾತ್ರಿ 12 ರ ಸುಮಾರಿಗೆ ನಡೆದಿದೆ.

Advertisement

ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಸಂತೋಷ ತಂ. ಹೂವಣ್ಣ ಗೌಡಗಾಂವ(40), ಶಂಕರ ತಂ. ದೇವಪ್ಪ ಝಳಕಿ(55), ಸಿದ್ದಮ್ಮ ಗಂ. ಶಂಕರ ಝಳಕಿ(50) ಹಾಗೂ ಇಂಡಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಹುಚ್ಚಪ್ಪ ತಂ. ಮಹಾಂತೇಶ ದೊಡ್ಡಮನಿ(5) ಮೃತ ದುರ್ದೈವಿಯಾಗಿದ್ದಾರೆ. ಹಾಗೂ ಪೂಜಾ ಗಂ. ಮಹಾಂತೇಶ ದೊಡ್ಡಮನಿ (30) ಅವರಿಗೆ ಗಂಭೀರ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಪಿಎಸ್ಐ ಮಡಿವಾಳಪ್ಪ ಬಾಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next