Advertisement

ಕಲಬುರಗಿಯಲ್ಲಿ ಮುಂದುವರೆದ ಮಳೆ : ಹತ್ತಕ್ಮೂ ಹೆಚ್ಚು ಮನೆ ಕುಸಿತ : ಮಳೆಗೆ ಮೊದಲ ಬಲಿ

10:08 PM Jul 09, 2022 | Team Udayavani |

ಕಲಬುರಗಿ : ತುಂತುರು ಹಾಗೂ ಸ್ವಲ್ಪ ಜೋರಾಗಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರೆದಿದೆ.

Advertisement

ಸತತ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲಲಾರಂಭಿಸಿದ್ದು, ಮನೆಗಳು ಸಹ ಬಿದ್ದಿರುವುದು ವರದಿಯಾಗಿದೆ. ಚಿತ್ತಾಪುರ ಪಟ್ಟಣದ ಸ್ಟೇಷನ್ ಪ್ರದೇಶದಲ್ಲಿ ಅರೀಪಾಬೇಗಂ ಗಂಡ ಸರ್ದಾರ್ ಅಲಿ (65) ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.

ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ನಗರ ಪ್ರದೇಶದಲ್ಲಂತು ನಾಗರೀಕರು ಮಳೆ ಹಿನ್ನೆಲೆಯಲ್ಲಿ ಹೊರಗೆ ಬಾರದೇ ಮನೆಯಲ್ಲೇ ಉಳಿದುಕೊಂಡಿರುವುದು ಕಂಡು ಬಂತು.

ವ್ಯಾಪಕ ಮಳೆ ಮುನ್ಸೂಚನೆ ಹಿನ್ನಡೆಯಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ಶುಕ್ರವಾರ ಸಂಜೆಯೇ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದರು.

ಗ್ರಾಮೀಣ ಭಾಗದಲ್ಲೂ ಸತತ ಮಳೆ ಸುರಿಯುತ್ತಿರುವುದರಿಂದ ರೈತರು ಸಹ ಹೊಲಗಳಿಗೆ ಹೋಗದೇ ಮನೆಯಲ್ಲಿ ಉಳಿದುಕೊಂಡಿರುವುದು ಕಂಡು ಬಂತು.‌ ಒಟ್ಟಾರೆ ಸತತ ಜಿಟಿಪಿಟಿ ಹಾಗೂ ಸ್ವಲ್ಪ ಜೋರಾದ ಮಳೆಗೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ತನ್ನ ಅಧೀನ ಅಧಿಕಾರಿಗಳಿಗೆ ಕೇಂದ್ರ ಸ್ಥಾನ ಬಿಡದಿರುವಂತೆ ನಿರ್ದೇಶನ ನೀಡಲಾಗಿದೆ.

Advertisement

ಭಾಗಶ ಬಿದ್ದ 10 ಮನೆಗಳು : ಸತತ ಮಳೆಗೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಮನೆಗಳು ಭಾಗಶ: ಬಿದ್ದಿವೆ.‌ ಅದೇ ರೀತಿ ಇನ್ನೂ ಹಲವೆಡೆ ಮನೆಗಳು ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆ ಯಾದ್ಯಂತ 17.08 ಮೀ.ಮೀ. ಮಳೆಯಾಗಿದೆ.‌ ಅತಿ ಹೆಚ್ಚಿನ ಮಳೆ ಚಿಂಚೋಳಿ ಹಾಗೂ ಶಹಾಬಾದ್ ತಾಲೂಕಿನಲ್ಲಿ 25 ಮೀ. ಮೀ ಮಳೆಯಾಗಿದೆ. ಅತಿ ಕಡಿಮೆ‌ ಅಫಜಲಪುರ ತಾಲೂಕಿನಲ್ಲಿ 16. 7 ಮೀ.‌ಮೀ ಮಳೆಯಾಗಿದೆ.

ರೇನ್ ಕೊಟ್ ಗೆ ಮುಗಿ ಬಿದ್ದ ಜನತೆ

ಸತತ ಸುರಿಯುತ್ತಿರುವ ಮಳೆಯಿಂದ ಹಾಗೂ ಊಟಿಯಂತೆ ತಣ್ಣಗೆ ವಾತಾವರಣ ನಿರ್ಮಾಣವಾಗಿದ್ದರಿಂದ ಕಲಬುರಗಿ ನಗರದ ಪ್ರದೇಶದಲ್ಲಿ ರೇನ್ ಕೋಟ್ ಖರೀದಿ‌ ಮಾಡಲು ಜನ ಮುಗಿ ಬಿದ್ದಿರುವುದು ಕಂಡು‌ಬಂತು.‌ ಒಟ್ಟಾರೆ ಸತತ ಜಿಟಿಪಿಟಿ‌ ಮಳೆಯಿಂದ ರಸ್ತೆಗಳು ಜನರಿಲ್ಲದೇ ಕೆಲ‌ ಸಮಯ ಭಣಗುಟ್ಟಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next