Advertisement
ಸತತ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲಲಾರಂಭಿಸಿದ್ದು, ಮನೆಗಳು ಸಹ ಬಿದ್ದಿರುವುದು ವರದಿಯಾಗಿದೆ. ಚಿತ್ತಾಪುರ ಪಟ್ಟಣದ ಸ್ಟೇಷನ್ ಪ್ರದೇಶದಲ್ಲಿ ಅರೀಪಾಬೇಗಂ ಗಂಡ ಸರ್ದಾರ್ ಅಲಿ (65) ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
Related Articles
Advertisement
ಭಾಗಶ ಬಿದ್ದ 10 ಮನೆಗಳು : ಸತತ ಮಳೆಗೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಮನೆಗಳು ಭಾಗಶ: ಬಿದ್ದಿವೆ. ಅದೇ ರೀತಿ ಇನ್ನೂ ಹಲವೆಡೆ ಮನೆಗಳು ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆ ಯಾದ್ಯಂತ 17.08 ಮೀ.ಮೀ. ಮಳೆಯಾಗಿದೆ. ಅತಿ ಹೆಚ್ಚಿನ ಮಳೆ ಚಿಂಚೋಳಿ ಹಾಗೂ ಶಹಾಬಾದ್ ತಾಲೂಕಿನಲ್ಲಿ 25 ಮೀ. ಮೀ ಮಳೆಯಾಗಿದೆ. ಅತಿ ಕಡಿಮೆ ಅಫಜಲಪುರ ತಾಲೂಕಿನಲ್ಲಿ 16. 7 ಮೀ.ಮೀ ಮಳೆಯಾಗಿದೆ.
ರೇನ್ ಕೊಟ್ ಗೆ ಮುಗಿ ಬಿದ್ದ ಜನತೆ
ಸತತ ಸುರಿಯುತ್ತಿರುವ ಮಳೆಯಿಂದ ಹಾಗೂ ಊಟಿಯಂತೆ ತಣ್ಣಗೆ ವಾತಾವರಣ ನಿರ್ಮಾಣವಾಗಿದ್ದರಿಂದ ಕಲಬುರಗಿ ನಗರದ ಪ್ರದೇಶದಲ್ಲಿ ರೇನ್ ಕೋಟ್ ಖರೀದಿ ಮಾಡಲು ಜನ ಮುಗಿ ಬಿದ್ದಿರುವುದು ಕಂಡುಬಂತು. ಒಟ್ಟಾರೆ ಸತತ ಜಿಟಿಪಿಟಿ ಮಳೆಯಿಂದ ರಸ್ತೆಗಳು ಜನರಿಲ್ಲದೇ ಕೆಲ ಸಮಯ ಭಣಗುಟ್ಟಿರುವುದು ಕಂಡು ಬಂತು.