Advertisement

ಮನೆಯೊಳಗೆ ರಕ್ತದ ಮಡುವಿನಲ್ಲಿ ಪತ್ತೆಯಾಯ್ತು ವ್ಯಕ್ತಿಯ ಶವ: ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಶಂಕೆ

04:42 PM Dec 22, 2022 | Team Udayavani |

ಕೊಳ್ಳೇಗಾಲ: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಯೊಂದು ತಾಲ್ಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಮಹದೇವಸ್ವಾಮಿ (47) ಎಂಬಾತನೇ ಹತ್ಯೆಯಾದ ದುರ್ದೈವಿ.

ಮೃತನ ಪುತ್ರಿ ಸ್ನೇಹ ಕಾಲೇಜಿನಿಂದ ಬಂದು ಮನೆಯ ಬಾಗಿಲನ್ನು ತಳ್ಳಿ ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದನ್ನು ಕಂಡು ಗ್ರಾಮಾಂತರ ಪೋಲೀಸ್ ರಾಣಿಗೆ ದೂರು ನೀಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವ ಕುಮಾರ್. ಎ.ಎಸ್.ಪಿ ಸುಂದರ್ ರಾಜ ಸಿಬಂದಿ ವರ್ಗ ಪರಿಶೀಲನೆ ನಡೆಸಿದರು.

ಕೊಲೆ ಶಂಕೆ ಹಿನ್ನಲೆಯಲ್ಲಿ ಮೈಸೂರಿನಿಂದ ಬೆರಳಚ್ಚು ತಜ್ಞರನ್ನು ಮತ್ತು ಪೋಲೀಸ್ ನಾಯಿ ಕರೆಸಿ ತನಿಖೆ ಕೈಗೊಂಡು ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ.

Advertisement

ಗ್ರಾಮಾಂತರ ಪೋಲೀಸ್ ರಾಣಿಯ ಪಿ.ಎಸ್.ಐ. ಮಂಜುನಾಥ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ಜನವಸತಿ ಪ್ರದೇಶದಲ್ಲೇ ತಂಡದಿಂದ ಯುವಕನ ಬರ್ಬರ ಹತ್ಯೆ…

Advertisement

Udayavani is now on Telegram. Click here to join our channel and stay updated with the latest news.

Next