Advertisement

Kalaburagi: ಹಣ ಡಬಲ್ ಮಾಡಿ ಬಹುಕೋಟಿ‌ ವಂಚನೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು

07:01 PM May 28, 2024 | Team Udayavani |

ಕಲಬುರಗಿ: ಹಣ ಡಬಲ್ ಮಾಡಿ ಕೊಡುವುದಾಗಿ ಬಹುಕೋಟಿ ಹಣ ದೋಚಿ‌ ಪರಾರಿಯಾಗಿದ್ದ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

Advertisement

ಉತ್ಕರ್ಷ ವರ್ದಮಾನೆ ಹಾಗೂ ಸಾವಿತ್ರಿ ವರ್ದಮಾನೆ ಶರಣಾದ ಆರೋಪಿಗಳು. ಆರೋಪಿಗಳೇ ನೇರವಾಗಿ ಕಲಬುರಗಿಯ ಜೆ.ಎಂ.ಎಫ್.ಸಿ. 2 ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಆರೋಪಿಗಳು 30 ಕೋಟಿ ರೂ. ತೆಗೆದುಕೊಂಡು ಪರಾರಿಯಾಗಿರುವ ವಿರುದ್ದ ರೋಜಾ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿತ್ತು.

ಹಣ ಡಬ್ಲಿಂಗ್ ಮಾಡುವುದಾಗಿ ಉತ್ಕರ್ಷ ವರ್ದಮಾನೆ ಹಾಗೂ ಸಾವಿತ್ರಿ ವರ್ದಮಾನೆ‌ ಬರೊಬ್ಬರಿ 30 ಕೋಟಿ ವಂಚಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ದಂಪತಿಗಳು ಪರಾರಿಯಾಗಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next