Advertisement

ಇತಿಹಾಸ ನಿರ್ಮಿಸಿದ ಸಾಹಿತ್ಯ ಸಮ್ಮೇಳನ

03:49 PM Feb 10, 2020 | |

ಕಲಬುರಗಿ: ಮೂರು ದಿನಗಳ ಕಾಲ ನಡೆದ 85ನೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅನೇಕ ವಿಧದಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದರು.

Advertisement

ರವಿವಾರ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಅಂದಾಜು 5ರಿಂದ-6 ಲಕ್ಷ ಜನ ಬಂದಿರುವುದು, 22 ಸಾವಿರ ಪ್ರತಿನಿಧಿಗಳಾಗಿರುವುದು, ನಿರೀಕ್ಷೆ ಮೀರಿದ ಪುಸ್ತಕ ವಹಿವಾಟು, ಎಲ್ಲೂ ಒಂದು ಅನಪೇಕ್ಷಿತ ಘಟನೆ ನಡೆಯದಿರುವುದು, ಯಾರಿಗೂ ಊಟದ ಕೊರೆತೆಯಾಗದಂತೆ ಸಮ್ಮೇಳನ ನಡೆದಿರುವುದು ದಾಖಲೆಯಾಗಿದೆ ಎಂದು ವಿವರಣೆ ನೀಡಿದರು.

ಸಮ್ಮೇಳನ ಯಶಸ್ವಿ ಯಲ್ಲಿ ಶಾಸಕ-ಜನಪ್ರತಿನಿಧಿಗಳ ನೇತೃತ್ವ ಹಾಗೂ ಅಧಿಕಾರಿಗಳನ್ನು ಒಳಗೊಂಡ ಕಾರ್ಯಾಧ್ಯಕ್ಷರು, ಇತರೆ ಅಧಿಕಾರಿಗಳ ತಂಡ ಶ್ರಮವಹಿಸಿರುವುದು, ಅದರಲ್ಲೂ ದಕ್ಷ, ದೂರದೃಷ್ಟಿಯುಳ್ಳ ಹಾಗೂ ಹಗಲಿರಳು ಶ್ರಮಿಸಿದ ಜಿಲ್ಲಾಧಿಕಾರಿ ಶರತ್‌ ಬಿ. ಅವರ ಜತೆಗೆ, ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಗೆ ಹೆಚ್ಚಿನ ಸಲ ಬಾರದೇ ಇದ್ದರೂ ದಿನನಿತ್ಯ ಸಿದ್ಧತೆಗಳ ವಿವರಣೆ ಕೇಳಿ, ಮಾರ್ಗದರ್ಶನ ನೀಡಿರುವುದು ಸಮ್ಮೇಳನ ಯಶಸ್ವಿ ಗೆ ಕಾರಣಗಳಾಗಿವೆ ಎಂದು ಹೇಳಿದರು.

ತಾವು ಒಂಭತ್ತು ಸಮ್ಮೇಳನದಲ್ಲಿ ಭಾಗವಹಿಸಿ ಎಲ್ಲವನ್ನು ನೋಡಿದ್ದೇವೆ. ಆದರೆ ಕಲಬುರಗಿ ಸಮ್ಮೇಳನ ಎಲ್ಲದರಲ್ಲೂ ಒಂದೆರಡು ಹೆಜ್ಜೆ ಮುಂದಿದೆ. ಹೀಗಾಗಿ ಎಲ್ಲರಿಗೂ ಶಿರಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ ಎಂದರು.

ಕಸಾಪ ಗೌರವ ಕಾಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ನಾಗರಹಳ್ಳಿ, ಖಜಾಂಚಿ ದೌಲತರಾವ್‌ ಮಾಲಿಪಾಟೀಲ ಹಾಗೂ ಪದಾಧಿಕಾರಿಗಳಾದ ಸೂರ್ಯಕಾಂತ ಪಾಟೀಲ, ಲಿಂಗರಾಜ ಸಿರಗಾಪುರ, ಆನಂದ ನಂದೂರಕರ್‌, ವಿಶ್ವನಾಥ ಭಕರೆ, ವೀರಸಂಗಪ್ಪ, ಪ್ರೇಮಕುಮಾರ, ರಮೇಶ ಕಡಾಳೆ, ಚಂದ್ರಶೇಖರ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next