Advertisement

ಕಾಲ್ನಡಿಗೆಯಲ್ಲಿ ಸಾಗಿದ ಕೂಲಿಕಾರರು

12:59 PM Apr 19, 2020 | Naveen |

ಕಲಬುರಗಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಮಾಡಿರುವುದರಿಂದ ನೆರೆಯ ತೆಲಂಗಾಣದ ವಿಕಾರಾಬಾದ್‌ ಜಿಲ್ಲೆಯ ತಾಂಡೂರಿಗೆ ಸುಮಾರು 150 ಕಿಲೋ ಮೀಟರ್‌ ದೂರ ಕೂಲಿ ಕಾರ್ಮಿಕರು ನಡೆದುಕೊಂಡೇ ಸಾಗುತ್ತಿದ್ದಾರೆ.

Advertisement

ರಾಯಚೂರು ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ವಾಹನ ಸಂಚಾರ ರದ್ದಾಗಿರುವ ಕಾರಣ ತಮ್ಮ ಊರಾದ ತಾಂಡೂರು ಸಮೀಪದ ಕೊಸಗಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಮಾರ್ಗವಾಗಿ ಜಿಲ್ಲೆಯನ್ನು ಹಾಯ್ದು ಸಾಗುತ್ತಿದ್ದಾರೆ.

ಶನಿವಾರ ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಸಮೀಪ ತೆಲಂಗಾಣದತ್ತ ಸಾಗುತ್ತಿದ್ದ ಇವರು, ಕಳೆದ ನಾಲ್ಕು ದಿನಗಳಿಂದ ಕಾಲ್ನಡಿಗೆಯಲ್ಲೇ ಊರಿನತ್ತ ಹೊರಟಿದ್ದೇವೆ. ಇನ್ನು ಹಲವು ಗಂಟೆಗಳ ನಂತರ ಊರು ಸೇರಲಿದ್ದೇವೆ ಎಂದು ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ ಹಾಗೂ ಹಣಮಂತ ಪೂಜಾರಿ ಅವರಿಗೆ ತಿಳಿಸಿದ್ದಾರೆ. ಮೂವರು ಮಹಿಳೆಯರು ಹಾಗೂ ಮೂವರು ಪುರುಷರಿರುವ ಒಟ್ಟು ಆರು ಜನ ಕಾರ್ಮಿಕರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next