Advertisement

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

02:36 PM Mar 24, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮೂರು ಸಾವಿರ ಕೋ.ರೂ ನೀಡಿದ್ದೇವೆ. ಪಾಪರ್ ಆಗಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರ ಕೇಳಿದ ಮಾತ್ರಕ್ಕೆ ಸರ್ಕಾರ ಪಾಪರ್ ಆಗಿದೆ ಎನ್ನುವುದು ಯಾವ ನ್ಯಾಯ? ಪರಿಹಾರ ಕೇಳುವುದು ತಪ್ಪಾ ಎಂದು ವಿಪಕ್ಷ ನಾಯಕರಿಗೆ ಸಚಿವ ಖಂಡ್ರೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ.‌ ನಾವೇ ಹೆಚ್ಚಿನ ಸ್ಥಾನ‌ ಗೆಲ್ಲುತ್ತೇವೆ.‌ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದ ದೇಶದ ಜನ ಬೇಸತ್ತಿದ್ದಾರೆ. ಪ್ರತಿ ಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ.‌ ಕಾಂಗ್ರೆಸ್ ಗೆಲುವು ಸಂವಿಧಾನ ಗೆಲುವು ಆಗಿದೆ. ಪ್ರಜಾಪ್ರಭುತ್ವ ಗೆಲುವು ಸಂವಿಧಾನದ ಗೆಲುವು ಎಂದು ಜನ‌‌ ನಂಬಿಕೊಂಡಿದ್ದಾರೆ.  ಬಿಜೆಪಿಯವರು ಮೋದಿ ಅಲೆ ಇದೆ ಎಂದು ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿದ್ದಾರೆ.‌ ಅಧಿಕಾರ ದುರ್ಬಳಿಕೆ ಮಾಡಿಕೊಂಡು‌ ಮತ್ತೆ ಗೆಲ್ಲುವ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ. ‌ನಮ್ಮ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದರು.‌

ಶಾಸಕ ಕಾಶಪ್ಪನವರ ಪತ್ನಿಗೆ ಟಿಕೆಟ್ ಕೈ ತಪ್ಪಿ ದ್ದಕ್ಕೆ ಸಿಡಿದೆದ್ದಿರುವುದನ್ನು ಪಕ್ಷದ ವರಿಷ್ಠರು ಮಾತನಾಡಿ ಬಗೆಹರಿಸುತ್ತಾರೆ. ಕಾಶಪ್ಪನವರ್ ಕಾಂಗ್ರೆಸ್ ಜತೆ ಇರುತ್ತಾರೆ ಎಂದು ಸಚಿವ ಖಂಡ್ರೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next