Advertisement

ಬಸವ ಜಯಂತಿ ಸರಳ ಆಚರಣೆಗೆ ಮನವಿ

11:44 AM Apr 26, 2020 | Naveen |

ಕಲಬುರಗಿ: ರವಿವಾರ ಸರಳವಾಗಿ ನಡೆಯುವ ಬಸವ ಜಯಂತಿ ಹಿನ್ನೆಲೆಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಗತ್‌ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಆವರಣವನ್ನು ಸ್ವತ್ಛತಾ ಕಾರ್ಯ ಕೈಗೊಂಡರು.

Advertisement

ಬಸವೇಶ್ವರ ಜಯಂತಿ ಉತ್ಸವವನ್ನು ಅತಿ ಸರಳ ರೂಪದಲ್ಲಿ ಆಚರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಇತರ ಪದಾಧಿಕಾರಿಗಳು ಚರ್ಚಿಸಿದರು. ಬಸವೇಶ್ವರ ಪುತ್ಥಳಿ ಕೆಳಭಾಗದಲ್ಲೇ ಅನುಕೂಲವಾಗುವ ನಿಟ್ಟಿನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣಗೊಳಿಸಲಾಯಿತು.

ಬಸವ ಭಕ್ತರು ಜಗತ್‌ ವೃತ್ತದಲ್ಲಿ ಜನ ಸೇರದೆ ತಮ್ಮ ತಮ್ಮ ಮನೆಗಳಲ್ಲಿ ಸರಳ ರೂಪದಲ್ಲಿ ಜಯಂತಿ ಆಚರಿಸುವ ಮೂಲಕ ಆದರ್ಶ ಮೆರೆಯಬೇಕು ಎಂದು ಮನವಿ ಮಾಡಿದರು. ಪ್ರಧಾನ ಕಾರ್ಯದರ್ಶಿ ಡಾ. ಶರಣ್‌ ಬಿ ಪಾಟೀಲ್‌ , ಪ್ರಶಾಂತ್‌ ಗುಡ್ಡ, ಸಿದ್ದು ಪಾಟೀಲ್‌, ಅಣವೀರ ಪಾಟೀಲ್‌, ಶಂಭು ಪಾಟೀಲ್‌ ಬಳಬಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next