Advertisement

ವಿದ್ಯಾರ್ಥಿಗಳ ಪ್ರಥಮ ಆಯ್ಕೆ ಎಸ್‌ಬಿ

10:56 AM Nov 11, 2019 | Naveen |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಬೆಳವಣಿಗೆಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ್ದು ಮಹೋನ್ನತ ಕಾರ್ಯವಾಗಿದ್ದು, ಗುಣಮಟ್ಟದ ಶಿಕ್ಷಣದಲ್ಲಿ ಯಾವುದೇ ಕಾರಣಕ್ಕೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸಿಲ್ಲ, ಉದ್ಭವಿಸುವುದೂ ಇಲ್ಲ ಎಂದು ಶರಣಬಸವೇಶ್ವರ ಮಹಾದಾಸೋಹಿ ಮಹಾಮನೆ ಪೀಠಾಧಿಪತಿ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ನುಡಿದರು.

Advertisement

ರವಿವಾರದಿಂದ ಆರಂಭವಾದ ಎರಡು ದಿನಗಳ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌) ಸುವರ್ಣ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವ, ಶರಣಬಸವೇಶ್ವರ ಸಂಯುಕ್ತ ವಸತಿ ಪಿಯು ಕಾಲೇಜಿನ ಬೆಳ್ಳಿ ಮಹೋತ್ಸವ, ಅಪ್ಪ ಸಿಬಿಎಸ್‌ಸಿ ಶಾಲೆಯ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೊಡ್ಡಪ್ಪ ಅಪ್ಪ 1918ರಲ್ಲಿ ಗ್ರಂಥಾಲಯ ಆರಂಭಿಸುವ ಮೂಲಕ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು. ನಂತರದಲ್ಲಿ ಕಲೆ ಮತ್ತು ವಿಜ್ಞಾನ ಕಾಲೇಜುಗಳು ಆರಂಭವಾದವು. ನಾನು ಎಂಎ ಮುಗಿಸಿ ಬಂದ ಬಳಿಕ ಸಂಘದ ಕಾರ್ಯದರ್ಶಿಯಾಗಿ ನೇಮಿಸಿದರು. ಇಂಗ್ಲೆಂಡ್‌, ಡೆಹ್ರಾಡೂನ್‌ ಸೂಲ್ಕ್ಗಳಲ್ಲಿ ಸಿಗುವ ಶಿಕ್ಷಣ ನಮ್ಮಲ್ಲೂ ಸಿಗಬೇಕೆಂಬ ಇಚ್ಛೆಯಿಂದ ಶರಣಬಸವೇಶ್ವರ ಪಬ್ಲಿಕ್‌ ಸ್ಕೂಲ್‌ ಆರಂಭಿಸಲಾಯಿತು. ಅಂದಿನಿಂದಲೂ ಗುಣಮಟ್ಟದ ಶಿಕ್ಷಣದಲ್ಲಿ ರಾಜಿ ಮಾಡಿಕೊಂಡ ಪ್ರಮೇಯವೇ ಬಂದಿಲ್ಲ ಎಂದರು.

ಎಸ್‌ಬಿ ಪಬ್ಲಿಕ್‌ ಸೂಲ್ಕ್ವೊಂದರಲ್ಲೇ ಹತ್ತು ಸಾವಿರ ಮಕ್ಕಳು ಓದುತ್ತಿದ್ದಾರೆ. ಹಿಂದೂಸ್ತಾನದ ಯಾವುದೇ ಭಾಗದಲ್ಲೂ ಇಷ್ಟೊಂದು ಸಂಖ್ಯೆಯ ಮಕ್ಕಳು ಪಬ್ಲಿಕ್‌ ಸೂಲ್ಕ್ನಲ್ಲಿ ಇರಲಿಕ್ಕಿಲ್ಲ. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ ವರೆಗೂ ಗುಟ್ಟಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವರ್ಷ 500 ವಿದ್ಯಾರ್ಥಿಗಳು ಮೆಡಿಕಲ್‌ಗೆ ಪ್ರವೇಶ ಪಡೆಯುತ್ತಾರೆ. ನಮ್ಮಲ್ಲಿ ಓದಿದ ಅನೇಕರು ಉನ್ನತ ಸ್ಥಾನಗಳಲ್ಲಿ ಇದ್ದಾರೆ. ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ದಿ. ಧರ್ಮಸಿಂಗ್‌ ಮುಖ್ಯಮಂತ್ರಿ ಆಗಿದ್ದರು. ಈಗಿನ ವಿದ್ಯಾರ್ಥಿಗಳು ಮುಂದೆ ಶಾಸಕರು, ಸಂಸದರು, ಉನ್ನತ ಅಧಿಕಾರಿಗಳು ಆಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಚಾರ ವಿನಿಮಯ ಮಾಡುತ್ತಾರೆ. ಮನೆಯಲ್ಲಿ ಮಾಡಬೇಕಾದ ಹೋಮ್‌ ವರ್ಕ್‌ನ್ನು 45 ನಿಮಿಷ ಶಾಲೆಯಲ್ಲೇ ಮುಗಿಸುವ ವ್ಯವಸ್ಥೆ ಇದೆ. ವರ್ಷಕ್ಕೆ ಶಿಕ್ಷಕರ ವೇತನ 30 ಕೋಟಿ ರೂ. ಆಗುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ ಎಂಎ ತರಗತಿಗಳು ಮೂರು ಗಂಟೆ ನಡೆಸುವ ಉದಾಹರಣೆಗಳು ಬೇರೆ ಎಲ್ಲೂ ಸಿಗುವುದಿಲ್ಲ. ಶರಣಬಸವೇಶ್ವರ ಪಬ್ಲಿಕ್‌ ಸ್ಕೂಲ್‌ ಸಹ ಶತಮಾನೋತ್ಸವ ಆಚರಿಸಲಿದೆ ಎಂದರು.

Advertisement

ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶರಣಬಸವೇಶ್ವರರ ಪರಂಪರೆಯಲ್ಲಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬೆಳೆದು ಬಂದಿದ್ದಾರೆ. ದೊಡ್ಡಪ್ಪ ಅಪ್ಪ ನೆಟ್ಟ ಶಿಕ್ಷಣ ಸಸಿಯನ್ನು ಶರಣಬಸವಪ್ಪ ಅಪ್ಪ ಹೆಮ್ಮರವಾಗಿ ಬೆಳೆಸಿದ್ದಾರೆ. 30 ವಿದ್ಯಾರ್ಥಿಗಳಿಂದ ಆರಂಭವಾದ ಶಿಕ್ಷಣ ಸಂಸ್ಥೆಯಲ್ಲಿ ಈಗ 30 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ಸಾಮಾನ್ಯ ವಿಷಯವಲ್ಲ ಎಂದರು.

ಕ್ರಿಶ್ಚನ್‌ ಮಿಷಿನರಿಗಳ ನಂತರ ಲಿಂಗಾಯತರು ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದು ಜ್ಞಾನಪೀಠ ಪುರಸ್ಕೃತ ಯು.ಆರ್‌. ಅನಂತಮೂರ್ತಿ ಅನೇಕ ವರ್ಷಗಳ ಹಿಂದೆಯೇ ಹೇಳಿದ್ದರು. 19ನೇ ಶತಮಾನದಿಂದ ಲಿಂಗಾಯತರು ಅಕ್ಷರ ಕ್ರಾಂತಿಯಲ್ಲಿ ತೊಡಗಿದ್ದಾರೆ. ಈಗ ಅಪ್ಪ ವಿದ್ಯಾ ಭಂಡಾರಿ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಹೇಳಿದರು.

ಬೀದರ್‌ನ ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ಡಾ| ಉಮೇಶ ಜಾಧವ, ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ಮಾತನಾಡಿದರು. ಸಮಾಧಾನ ಧ್ಯಾನ ಮಂದಿರದ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮೀಜಿ, ತುಮಕೂರಿನ ಶ್ರೀ ಹಿರೇಮಠದ ಡಾ| ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಶುಭಕೋರಿ ಸಂದೇಶ ಕಳುಹಿಸಿದ್ದರು.

ಚೌದಾಪುರಿ ಮಠದ ರಾಜಶೇಖರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ ಪರ್ಸನ್‌ ಮಾತೋಶ್ರೀ ದಾಕ್ಷಾಯಿಣಿ ಎಸ್‌. ಅಪ್ಪ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಾಚಾರ್ಯ ಎನ್‌.ಎಸ್‌. ದೇವರಕಲ್‌ ಹಾಜರಿದ್ದರು.

ಕಲಬುರಗಿ ನಗರ ಕ್ಷೇತ್ರದ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಮಾಜಿ ಮೇಯರ್‌ ಶರಣು ಮೋದಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ ನಮೋಶಿ, ಮುಖಂಡರಾದ ನಾರಾಯಣರಾವ್‌ ಕಾಳೆ, ಸಿ.ಎ. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಹಾಗೂ ಎಸ್‌ಬಿಆರ್‌ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಬಸವರಾಜ ಖಂಡೇರಾವ್‌, ಉದಯಗಿರಿ ನವಣಿ, ಪ್ರಶಾಂತ ಮಾನಕರ, ಉಮೇಶ ಶೆಟ್ಟಿ, ದಿನೇಶ ಪಾಟೀಲ, ಶಂಕರಗೌಡ, ಶ್ರೀಶೈಲ ಹೊಗಾಡೆ ಹಾಗೂ ಸಂಸ್ಥೆಯ ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರು “ಏಕದಂತಾಯ ವಕ್ರತುಂಡಾಯ ಗೌರಿತನಯಾಯ  ಧೀಮಹಿ ಗಜೇಶಾಣಾಯ ಬಾಲಚಂದ್ರಾಯ ಶ್ರೀ ಗಣೇಶಾಯ  ಧೀಮಹಿ’ ನೃತ್ಯವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next