Advertisement

ನಾಳೆಯಿಂದ ಇಬ್ಬರು ಗಣ್ಯರ ಜನ್ಮಶತಮಾನೋತ್ಸವ

12:43 PM Oct 09, 2019 | Naveen |

ಕಲಬುರಗಿ: ಹಿರಿಯ ಸಾಹಿತಿ ಡಾ| ಸಿದ್ದಯ್ಯ ಪುರಾಣಿಕ ಹಾಗೂ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾಗಿದ್ದ ಪಂ. ಸಿದ್ದರಾಮ ಜಂಬಲದಿನ್ನಿ ಅವರ ಜನ್ಮಶತಮಾನೋತ್ಸವವನ್ನು ಸೆ.28 ಮತ್ತು 29ರಂದು ನಗರದ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಕಾಸ ಅಕಾಡೆಮಿ ಅಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಿಸಿದ ಇಬ್ಬರೂ ಮಹನೀಯರು ತಮ್ಮ ಲೇಖನಿ ಹಾಗೂ ಸಂಗೀತದಿಂದ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಅವರ ವ್ಯಕ್ತಿತ್ವ ನೆನಪಿಸುವ ಸಲುವಾಗಿ ನವೆಂಬರ್‌ನೊಳಗೆ ಆರು ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು ಸೇರಿದಂತೆ ಒಟ್ಟು 100 ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಿದ್ದಯ್ಯ ಪುರಾಣಿಕರ ಆತ್ಮಚರಿತ್ರೆ ಹಾಗೂ ಪಂ.ಸಿದ್ದರಾಮ ಜಂಬಲದಿನ್ನಿಯವರ ವಚನೋದ್ಯಾನ ಕೃತಿಗಳನ್ನು ಮಾರಾಟಕ್ಕೆ ಇಡಲಾಗುವುದು ಎಂದರು.

ಸೆ.28ರಂದು ಬೆಳಗ್ಗೆ 10:30ಕ್ಕೆ ಸಿದ್ದಯ್ಯ ಪುರಾಣಿಕರ ಜನ್ಮ ಶತಮಾನೋತ್ಸವ ಆರಂಭಗೊಳ್ಳಲಿದೆ. ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಉದ್ಘಾಟಿಸುವರು. ಗುಲಬರ್ಗಾ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಡಾ| ಪರಿಮಳಾ ಅಂಬೇಕರ್‌ ಭಾಗವಹಿಸುವರು. ಮಧ್ಯಾಹ್ನ 12:30ಕ್ಕೆ ಡಾ| ಸಿದ್ದಯ್ಯ ಪುರಾಣಿಕರ ಸಾಹಿತ್ಯ ದರ್ಶನ ಕುರಿತು ಡಾ| ವೆಂಕಟಗಿರಿ ದಳವಾಯಿ ಉಪನ್ಯಾಸ ನೀಡುವರು. ಮಧ್ಯಾಹ್ನ ಪುರಾಣಿಕರ ಶಿಶು ಗೀತೆಗಳ ಗಾಯನ ನಡೆಯಲಿದೆ.

“ಶಿಶು ಸಾಹಿತ್ಯ’, “ಹೀಗಿದ್ದರು ನನ್ನ ತಂದೆ’ ಎನ್ನುವ ವಿಶೇಷ ಉಪನ್ಯಾಸವನ್ನು ಪುರಾಣಿಕರ ಪುತ್ರ ಪಿ.ಕೆ. ಪುರಾಣಿಕ ನೀಡುವರು ಎಂದರು.

Advertisement

ಸೆ.29ರಂದು ಬೆಳಗ್ಗೆ ಪಂ. ಸಿದ್ದರಾಮ ಜಂಬಲದಿನ್ನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯುವುದು. ಅಂತಾರಾಷ್ಟ್ರೀಯ ಕ್ಲಾರಿಯೊನೆಟ್‌ ವಾದಕ ಡಾ| ನರಸಿಂಹಲು ವಡವಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಂಬಲದಿನ್ನಿ ಅವರ ಪುತ್ರ ಡಾ| ಎಸ್‌. ಎಸ್‌. ಜಂಬಲದಿನ್ನಿ ತಮ್ಮ ತಂದೆ ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡುವರು ಎಂದು ವಿವರಿಸಿದರು.

ಬಳಿಕ ವಚನ ಗಾಯನ ನಡೆಯಲಿದೆ. ಮಧ್ಯಾಹ್ನ ವಡವಾಟಿ ಅವರೊಂದಿಗೆ ಸಂಗೀತ ಸಂವಾದ ನಡೆಯಲಿದೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಭಾಗವಹಿಸುವರು ಎಂದರು.

ವಿಕಾಸ ಅಕಾಡೆಮಿ ಟ್ರಸ್ಟಿ ವಿ. ಶಾಂತರೆಡ್ಡಿ, ಜನ್ಮ ಶತಮಾನೋತ್ಸವ ಸ್ಮೃತಿ ಸಲಹೆಗಾರ ಡಾ| ಸ್ವಾಮಿರಾವ ಕುಲಕರ್ಣಿ, ಸ್ಮೃತಿ ಸಂಚಾಲಕ ಡಾ| ಶ್ರೀನಿವಾಸ ಸಿರನೂರಕರ, ಶ್ರೀನಗರೇಶ್ವರ ವೆಲ್‌ಫೇರ್‌ ಸೊಸೈಟಿ ಕಾರ್ಯದರ್ಶಿ ರವೀಂದ್ರ ಮುಕ್ಕಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next