Advertisement

ಚಿತ್ರದುರ್ಗದಿಂದ ಬಂದ ಕಾರ್ಮಿಕರ ತಪಾಸಣೆ

04:41 PM Apr 26, 2020 | Naveen |

ಕಕ್ಕೇರಾ: ಚಿತ್ರದುರ್ಗದಿಂದ ಬಸ್‌ ಮೂಲಕ ಸ್ವ-ಗ್ರಾಮಕ್ಕೆ ಆಗಮಿಸಿದ 34 ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಚಿತ್ರದುರ್ಗ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಸರಕಾರಿ ಬಸ್‌ನಲ್ಲಿ ಕಕ್ಕೇರಾ, ನಾಗರಾಳ, ಬಲಶೆಟ್ಟಿಹಾಳ, 3, ಜಾಲಿಬೆಂಚಿ, ಏದಲಬಾವಿ ಗ್ರಾಮಗಳ ಸೇರಿ 34 ಕಾರ್ಮಿಕರು ಮರಳಿ ಬಂದಿದ್ದಾರೆ.

Advertisement

ಚಿತ್ರದುರ್ಗದಿಂದ ಬಸ್‌ ಆಗಮಿಸುತ್ತಿದ್ದಂತೆ ಗ್ರೇಡ್‌-2 ತಹಶೀಲ್ದಾರ್‌ ಸೂಫಿಯಾ ಸುಲ್ತಾನ್‌ ಹಾಗೂ ಉಪ ತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ ಪಟ್ಟಣದ ಪುರಸಭೆಯಲ್ಲಿ ವೈದ್ಯಕೀಯ ಸಿಬ್ಬಂದಿಯಿಂದ ಕೋವಿಡ್ ವೈರಸ್‌ ತಪಾಸಣೆ ಮಾಡಿಸಲಾಯಿತು. ನಾಗರಾಳ ಗ್ರಾಮದ ಮೂವರು ಮತ್ತು ಕಕ್ಕೇರಾದ ಮಾಲಗತ್ತೇರದೊಡ್ಡಿಯ ಒಬ್ಬರಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಗಂಟಲು ದ್ರವವನ್ನು ಸುರಪುರ ಆಸ್ಪತ್ರೆಗೆ ಕಳುಹಿಸಲಾಗಿದೆ. ಒಬ್ಬರನ್ನು ಹೋಮ್‌ ಕ್ವಾರೆಂಟೈನ್‌ಲ್ಲಿ ಇರಲು ಸೂಚಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯಾಧಿಕಾರಿ ಡಾ| ಸಯಿದಾ ಮೋಸಿನ್‌ ನಾಜಿಮಾ,  ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ, ಗ್ರಾಮ ಲೆಕ್ಕಿಗ ಸಂತೋಷರೆಡ್ಡಿ, ನಟರಾಜ, ಪುರಸಭೆಯ ಅಶೋಕ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next