Advertisement

Belman: ಕಜೆ ಕುಕ್ಕುದಡಿ ಮಾರಿಗುಡಿ: ಇಂದು ಬ್ರಹ್ಮಕಲಶೋತ್ಸವ

11:23 AM Feb 26, 2024 | Team Udayavani |

ಬೆಳ್ಮಣ್‌: ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ವಾಗಿ ನಿರ್ಮಾಣಗೊಂ ಡಿರುವ ಕಜೆ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ ದಲ್ಲಿ ಫೆಬ್ರವರಿ 26ರಂದು ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಲಿದೆ.

Advertisement

ಬೆಳಗ್ಗೆ ಸ್ವಸ್ತಿವಾಚನ, ಬ್ರಹ್ಮ ಕಲಶಾಭಿಷೇಕ ಪ್ರಾರಂಭ, 11.17ಕ್ಕೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಬಳಿಕ ಪ್ರಸನ್ನ ಪೂಜೆ, ದೇವಿ ದರ್ಶನ, ಪಲ್ಲ ಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 5.30ರಿಂದ ಧಾರ್ಮಿಕ ಸಭೆ, ಮಹಾದಾನಿಗಳಿಗೆ ಗೌರವ, ಆಳ್ವಾಸ್‌ ವಿದ್ಯಾರ್ಥಿಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಕ್ಷೇತ್ರದ ಆಡಳಿತದಾರರ ಪರವಾಗಿ ಕಜೆ ಆರುಮನೆಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next