Advertisement

ಕಡೂರು : ಡಿಸಿ ಆದೇಶ ಉಲ್ಲಂಘಿಸಿ ರಥೋತ್ಸವ : ಅರ್ಚಕ ಸೇರಿ 9 ಜನರ ವಿರುದ್ಧ ಕೇಸ್ ದಾಖಲು

11:35 AM Jan 19, 2022 | Team Udayavani |

ಚಿಕ್ಕಮಗಳೂರು : ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ರಥೋತ್ಸವ ನಡೆಸಿದ ಪರಿಣಾಮ ದೇವಳದ ಅರ್ಚಕ ಸೇರಿ ಒಂಬತ್ತು ಮಂದಿಯ ವಿರುದ್ಧ ಕೇಸು ದಾಖಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ರಂಗನಾಥಸ್ವಾಮಿ ದೇವಳದಲ್ಲಿ ನಡೆದಿದೆ.

Advertisement

ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭ, ರಥೋತ್ಸವಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಸಖರಾಯಪಟ್ಟಣದ ರಂಗನಾಥಸ್ವಾಮಿ ದೇವಳದಲ್ಲಿ ನಿಯಮ ಉಲ್ಲಂಘಿಸಿ ರಥೋತ್ಸವದಲ್ಲಿ ಸಾವಿರಾರು ಮಂದಿ ಸೇರಿದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ಜಿತೇಂದ್ರ ಎಂಬುವವರು ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ದೇಗುಲದ ಅರ್ಚಕ ಕೃಷ್ಣಭಟ್, ನವೀನ್, ವರುಣ್,ರೀತು, ಸಂದೀಪ್, ಸಚಿನ್, ಗಣೇಶ್, ಉಲ್ಲಾಸ್, ನಿತಿನ್ ವಿರುದ್ಧ ಕೇಸು ದಾಖಲಾಗಿದೆ.

ಇದನ್ನೂ ಓದಿ : ಬೆಳಗಿನ ಜಾವ ಸಾಂಘವಾಗಿ ನೆರವೇರಿದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ

Advertisement

Udayavani is now on Telegram. Click here to join our channel and stay updated with the latest news.

Next