Advertisement

ಕುಂದೂರು ಶ್ರೀ ಕೆಂಪಮ್ಮ ದೇವಿ ರಥೋತ್ಸವ

04:47 PM Apr 26, 2019 | Team Udayavani |

ಕಡೂರು: ತಾಲೂಕಿನ ಕುಂದೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ರಥೋತ್ಸವ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಾವಿರಾರು ಭಕ್ತರ ಹರ್ಷೋದ್ಘಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ಕುಂದೂರು, ನಾರಣಾಪುರ, ಎಸ್‌. ಮಾದಾಪುರ, ರಂಗಾಪುರ, ಗರುಡನಗಿರಿಯ ಐದುಹಳ್ಳಿಯ ಗ್ರಾಮಸ್ಥರು ಸೇರಿ ರಥೋತ್ಸವ ಆಚರಿಸುತ್ತಾರೆ ಕೆಂಪಮ್ಮ ದೇವಿಯನ್ನು ಶೃಂಗರಿಸಿ ಅಲಂಕರಿಸಿದ ರಥಕ್ಕೆ ಕರೆತರಲಾಯಿತು.

ನಾಗಸಮುದ್ರ ಗೊಲ್ಲರಹಟ್ಟಿಯ ಶ್ರೀ ಚಿತ್ರಲಿಂಗೇಶ್ವರ ಸ್ವಾಮೀಜಿ ಆಗಮನದ ನಂತರ ಅಂತರಘಟ್ಟಮ್ಮ, ಕೋಡಿಲಕ್ಕಮ್ಮ, ನಾಗತಿಹಳ್ಳಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀ ಕೆಂಪಮ್ಮ ತೇರು ಎಳೆಯಲಾಯಿತು. ನಂತರ ಉಯ್ನಾಲೋತ್ಸವ, ಅನ್ನಸಂತರ್ಪಣೆ ಕಾರ್ಯ ನಡೆದವು

ಶ್ರೀ ಕೆಂಪಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕ ಬೆಳ್ಳಿಪ್ರಕಾಶ್‌ ರಥೋತ್ಸವದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next