Advertisement

ರೈತರ ಭೂಮಿಗೆ ವೈಜ್ಞಾನಿಕ ದರ ನೀಡಿ

05:35 PM Sep 29, 2019 | Naveen |

ಕಡೂರು: ಪಟ್ಟಣದ ಬಳಿ ಹಾದು ಹೋಗುವ 206 ಬೈಪಾಸ್‌ ರಸ್ತೆಗೆ ಭೂ ಸ್ವಾಧಿಧೀನ ಪ್ರಕ್ರಿಯೆ
ನಡೆದಿದ್ದು, ಪರಿಹಾರ ಧನ ಅವೈಜ್ಞಾನಿಕವಾಗಿದೆ. ಹಾಗಾಗಿ, ಜಿಲ್ಲಾ ಧಿಕಾರಿಗಳು ಸಮಾಲೋಚನಾ ಸಭೆ ಕರೆದು ಭೂಮಿ ಕಳೆದುಕೊಳ್ಳುವ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಯಗಟಿ ಜಿಪಂ ಸದಸ್ಯ ಶರತ್‌ ಕೃಷ್ಣಮೂರ್ತಿ ಒತ್ತಾಯಿಸಿದರು.

Advertisement

ಪ್ರವಾಸಿ ಮಂದಿರದಲ್ಲಿ ನಡೆದ ಭೂಮಿ ಕಳೆದುಕೊಂಡ ರೈತರ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡಿರುವ ಜಮೀನುಗಳು ಕಸಬಾ ಹೋಬಳಿಯ ತಂಗಲಿ, ಮಲ್ಲಪ್ಪನಹಳ್ಳಿ, ಕೆ.ತಿಮ್ಮಾಪುರ, ಮಲ್ಲೇಶ್ವರ, ತುರುವನಹಳ್ಳಿ, ಉಳ್ಳಿನಾಗರೂ ಗ್ರಾಮ ಮತ್ತು ಬೀರೂರು ಕಾವಲು ಕಂದಾಯ ಗ್ರಾಮಗಳಾಗಿವೆ. ಈ ಗ್ರಾಮಗಳು ಕಡೂರು ಪುರಸಭೆ ವ್ಯಾಪ್ತಿಯಿಂದ ಒಂದುವರೆ ಕಿ.ಮೀ. ಒಳಗೆ ಇವೆ. ಕೆ.ತಿಮ್ಮಾಪುರ ಗ್ರಾಮದಲ್ಲಿ ವಶಪಡಿಸಿಕೊಂಡಿರುವ ಆಸ್ತಿಯಲ್ಲಿ ಪ್ರತಿ ಚ.ಮೀಟರ್‌ಗೆ 485 ರೂ. ಮೂಲ ದರಕ್ಕೆ ಲೆಕ್ಕ ಹಾಕಿ ಕೆಲವು ರೈತರಿಗೆ ಪರಿಹಾರ ನಿಗ ಪಡಿಸಿ ಪಾವತಿ ಸಹ ಮಾಡಲಾಗಿದೆ. ಆದರೆ, ಕೆ.ತಿಮ್ಮಾಪುರ
ಆಸ್ತಿಯಿಂದ ಸುಮಾರು 100 ಮೀ. ಸಮೀಪ ಇರುವ ಮಲ್ಲಪ್ಪನಹಳ್ಳಿ ಗ್ರಾಮದ ಆಸ್ತಿಗಳಿಗೆ ಪ್ರಾಧಿಕಾರದವರು ಸುಮಾರು 323 ರೂ. (ಪ್ರತಿ ಚ.ಮೀ.ಗೆ)ಮತ್ತು ಮಲ್ಲೇಶ್ವರ ಗ್ರಾಮದ ಆಸ್ತಿಗಳಿಗೆ 293 ರೂ. ಮೂಲ ದರ ನಿಗದಿ ಪಡಿಸಿ ಪಾವತಿ ಮಾಡಿರುವ ಅನೇಕ ಉದಾಹರಣೆ
ಗಳಿವೆ ಎಂದು ತಿಳಿಸಿದರು.

ಇಲ್ಲಿ ಕೇವಲ 100 ಮೀ. ಅಂತರಕ್ಕೆ ದರ ನಿಗದಿಯಲ್ಲಿ ವ್ಯತ್ಯಾಸವಾಗಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. ಅವೈಜ್ಞಾನಿಕ ದರಗಳಿಂದ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಈ ಬಗ್ಗೆ ವಿಶೇಷ ಭೂ ಸ್ವಾ ಧೀನಾಧಿ ಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈ ರೀತಿಯ ತೊಂದರೆಗಳು ತಂಗಲಿ, ಮಲ್ಲಪ್ಪನಹಳ್ಳಿ, ಮಲ್ಲೇಶ್ವರ, ತುರುವನಹಳ್ಳಿ, ಬೀರೂರು ಕಾವಲು ಗ್ರಾಮಗಳಲ್ಲಿ ಕಂಡು ಬಂದಿವೆ. ಇದಕ್ಕೆ ಪರಿಹಾರ ಅಥವಾ ಸಮಂಜಸವಾದ ಉತ್ತರವನ್ನು ಯಾರ ನೀಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಿದ್ದು, ರೈತರಿಗೆ ಸಮಗ್ರ ಮಾಹಿತಿ ನೀಡುವ ಮತ್ತು ಸಾರ್ವಜನಿಕ ಸಭೆಗಳು ಸಹ ನಡೆದಿಲ್ಲ. ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು, ಸಂಸದರ ಸಭೆ ಕರೆದು ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ರೈತ ಹಿರಿಯಣ್ಣ ಮಾತನಾಡಿ, ಭೂ ಸ್ವಾಧೀ ನಕ್ಕೆ ಒಳಪಡುವ ತೆಂಗು, ಅಡಕೆಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ. ದರ ನಿಗ ದಿಪಡಿಸುವಲ್ಲಿ ವ್ಯತ್ಯಾಸ ಹಾಗೂ ಅನ್ಯಾಯವಾಗಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ರೈತರು ಸಿದ್ಧರಿದ್ದು, ಕೂಡಲೇ ಕಡೂರು ಪಟ್ಟಣದಲ್ಲಿ ಸಭೆ ಕರೆಯಬೇಕೆಂದು ಒತ್ತಾಯ ಮಾಡಿದರು. ಅಲ್ಲದೆ, ಸರಕಾರ ಅಡಕೆ ಮರ ಒಂದಕ್ಕೆ 10,400 ರೂ. ನಿಗದಿ  ಮಾಡಿದೆ. ತೆಂಗಿನ ಮರ ಒಂದಕ್ಕೆ 25 ಸಾವಿರ ರೂ. ನಿಗದಿ  ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಪ್ರತಿ ಅಡಕೆ ಮರದ ಆಯಸ್ಸು
ಕನಿಷ್ಟ 80 ವರ್ಷಗಳೆಂದು ಅಂದಾಜಿಸಬಹುದಾಗಿದೆ.

Advertisement

ಇದರಂತೆ ಒಂದು ಅಡಕೆ ಮರಕ್ಕೆ 75 ಸಾವಿರ ದಿಂದ 1.5 ಲಕ್ಷ ರೂ. ನಿಗದಿಪಡಿಸಬೇಕು. ಪ್ರತಿ
ತೆಂಗಿನ ಮರಕ್ಕೆ 3 ಲಕ್ಷ ರೂ. ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಎಪಿಎಂಸಿ ನಿರ್ದೇಶಕ ಲಕ್ಕಣ್ಣ ಮಾತನಾಡಿ, 2016(ಕಂದಾಯ)ರಲ್ಲಿ ಜಮೀನಿಗೆ ಇದ್ದ ದರವನ್ನೇ ಈಗಲೂ ನಿಗದಿಪಡಿಸಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. ಇವೆಲ್ಲ ಪಿತಾರ್ಜಿತ ಆಸ್ತಿಗಳಾಗಿದ್ದು, ವ್ಯವಹಾರ ಹೆಚ್ಚಿಗೆ ನಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿಲ್ಲ ಎಂದರು.

ಮಲ್ಲೇಶ್ವರ ಗ್ರಾಮದ ಒಂದು ಎಕರೆ ಭೂಮಿಗೆ 13 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ಪುರಸಭೆ ವ್ಯಾಪ್ತಿಗೆ ಸೇರುವುದರಿಂದ ಈ ಜಮೀನನ್ನೇ ನಿವೇಶನಗಳಾಗಿ ಮಾರ್ಪಡಿಸಿದರೆ ಲಕ್ಷಾಂತರ ರೂ. ರೈತರಿಗೆ ದೊರೆಯಲಿದೆ. ಇಂತಹ ಪ್ರಕರಣಗಳಿದ್ದರೆ ಡಿಸಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಬೇಕೆಂದು ರೈತರಿಗೆ ಕರೆ ನೀಡಿದರು. ಕಡೂರು
ಪುರಸಭೆ ಸದಸ್ಯ ಈರಳ್ಳಿ ರಮೇಶ್‌, ತೋಟದ ಮನೆ ಮೋಹನ್‌, ದಂಡವತಿ ಬಾಬಣ್ಣ, ಪೇಟೆಯ ತಮ್ಮಯಣ್ಣ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next