Advertisement

ಬಿಜೆಪಿ ಮನೆ- ಮನೆ ಅಭಿಯಾನ

01:01 PM Jun 18, 2020 | Naveen |

ಕಡೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2 ನೇ ಅವಧಿಯ ಮೊದಲ ಒಂದು ವರ್ಷದ ಸಾಧನೆಯ ಕರಪತ್ರವನ್ನು ಕ್ಷೇತ್ರದಾದ್ಯಂತ ಮನೆ-ಮನೆಗೆ ಹಂಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಕಡೂರು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ. ದೇವಾನಂದ್‌ ತಿಳಿಸಿದರು.

Advertisement

ತಾಲೂಕಿನ ಯಗಟಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮನೆ- ಮನೆಗೆ ತೆರಳಿ ಕರ ಪತ್ರ ಹಂಚುವುದರ ಮೂಲಕ ಮೋದಿ ಅವರ ಸಾಧನೆಯನ್ನು ತಿಳಿಸಿ ಅವರು ಮಾತನಾಡಿದರು. ಮುಂದೆಯೂ ಪ್ರಧಾನಿ ಮೋದಿ ಅವರಿಂದ ಉತ್ತಮ ಸಾಧನೆ ಮೂಡಿ ಬರಲಿ ಎಂಬ ಮಾತುಗಳು ಕೇಳಿ ಬರುತ್ತಿದೆ ಎಂದರು. ಯಗಟಿ ಶಕ್ತಿ ಕೇಂದ್ರದ ಅಧ್ಯಕ್ಷ ಟಿ.ಎಂ. ದೇವರಾಜು, ಪ್ರಧಾನ ಕಾರ್ಯದರ್ಶಿ ಪಿ. ಕಿರಣ್‌ ಪ್ರಭು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next