Advertisement

“ಕಡೆಮನೆ’ರೆಡಿ

10:57 AM Oct 07, 2019 | Lakshmi GovindaRaju |

ಕೀರ್ತನ ಕ್ರಿಯೇಶನ್ಸ್‌ ಲಾಂಛನದಲ್ಲಿ ನಂದನ್‌.ಎಸ್‌. ತುಮಕೂರು ನಿರ್ಮಿಸುತ್ತಿರುವ “ಕಡೆಮನೆ’ ಚಿತ್ರವು ಈಗಾಗಲೇ ಸೆನ್ಸಾರ್‌ ಮುಗಿಸಿದ್ದು ಯು/ಎ ಸರ್ಟಿಫಿಕೇಟ್‌ ಪಡೆದಿದೆ. ಚಿತ್ರವನ್ನು ನವೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಗ್ರಾಮೀಣ ಸೊಗಡಿನ ಕಾಮಿಡಿ ಲವ್‌ ಹಾಗೂ ಹಾರಾರ್‌ ಕಥಾನಕದೊಂದಿಗೆ ಪಡ್ಡೆ ಹುಡುಗರ ಅವಾಂತರವನ್ನು ಬಿಚ್ಚಿಡಲಾಗಿದೆ. ಆಧುನಿಕತೆಯ ಸ್ಪರ್ಶದೊಂದಿಗೆ ಮನುಷ್ಯನ ಮಾನಸಿಕ ವೇದನೆಯ ತೊಳಲಾಟದಂತಹ ಕಥಾ ಹಂದರ ಹೊಂದಿದೆ.

Advertisement

ವಿನಯ್‌ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮಧುಸೂದನ್‌ ಛಾಯಾಗ್ರಹಣ, ಗೌತಮ್‌ ಶ್ರೀವತ್ಸ ಸಂಗೀತ, ರಘುನಾಥ್‌ ಸಂಕಲನ, ಅರುಣ್‌ ಕುಮಾರ್‌ ನೃತ್ಯ ನಿರ್ದೇಶನ, ಅಶೋಕ್‌ ಸಾಹಸ, ಧನಂಜಯ ಹಾಗೂ ಜಯ್‌ ಸಂಭಾಷಣೆ, ಲೋಕೇಶ್‌ ಸಾಹಿತ್ಯವಿದೆ. ಯುವರಾಜ್‌, ಕಲ್ಪನ, ಬಾಲರಾಜ ವಾಡಿ, ಉಷಾ, ಬ್ಯಾಂಕ್‌ ಜನಾರ್ಧನ್‌, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ, ಉಮೇಶ್‌, ಮಂಡ್ಯ ಸಿದ್ದು ಮುಂತಾದವರ ತಾರಾಬಳಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next