Advertisement

ಭಾಷೆ ಬಗ್ಗೆ ಅಭಿಮಾನ ಬೇಕು, ದುರಭಿಮಾನ ಸಲ್ಲದು: ಪೇಜಾವರ ಶ್ರೀ

07:58 AM Jan 30, 2019 | Team Udayavani |

ಕಡಬ : ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕಾದ್ದು ಸಹಜ. ಆದರೆ ಅದು ಇನ್ನೊಂದು ಭಾಷೆಯನ್ನು ವಿರೋಧಿಸುವ ದುರಭಿಮಾನ ಆಗಿರಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ಜರಗಿದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ದಶಮಾ ನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ರಾಜ್ಯದ ಸಾವಿರ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜತೆಗೆ ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ಆರಂಭಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ನಮ್ಮ ಸಹಮತವಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಕಲಿಕೆ ಅನಿವಾರ್ಯವೂ ಹೌದು. ಆದರೆ ಇಂಗ್ಲಿಷ್‌ ಭಾಷೆಯ ಬಗ್ಗೆ ವಿಪರೀತ ವ್ಯಾಮೋಹವೂ ಇರಬಾರದು. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕಲಿಕೆಯಂತೆ ಮಕ್ಕಳ ಗುಣ – ನಡತೆಗೂ ಅಂಕ ನೀಡುವಂತಿರಬೇಕು ಎಂದು ಶ್ರೀಗಳು ನುಡಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತ ನಾಡಿ, ಪೇಜಾವರ ಶ್ರೀಗಳಿಂದಾಗಿ ರಾಮಕುಂಜವು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಸಮಯ ಅಮೂ ಲ್ಯವಾಗಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿ ಕೊಂಡರೆ ಯಶಸ್ಸು ಸಿಗುವುದು. ಮೆಕಾಲೆ ಶಿಕ್ಷಣ ಪದ್ಧತಿಯಿಂದ ಹೊರಬಂದು ಭಾರತೀಯ ಶಿಕ್ಷಣ ಪದ್ಧತಿಯನ್ನು ಮತ್ತೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಸಂಸ್ಥೆಯ ಮೈದಾನ ಅಭಿವೃದ್ಧಿಗೆ 3 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪುತ್ತೂರು ಮಾಸ್ಟರ್‌ ಪ್ಲಾನರಿಯ ಮಾಲಕ ಎಸ್‌.ಕೆ. ಆನಂದ ಮಾತನಾಡಿ, ಕಾಲೇಜಿನ ದಶಮಾ ನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ 10 ಬಡ ಮಕ್ಕಳಿಗೆ ಹಳೆನೇರೆಂಕಿಯಲ್ಲಿರುವ ಮಾಸ್ಟರ್‌ ಪ್ಲಾನರಿ ಘಟಕದಲ್ಲಿ ವಸತಿ ಕಲ್ಪಿಸಿ, ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ನುಡಿದರು. ಮಹಾ ವಿದ್ಯಾಲಯದ ನಿರ್ದೇಶಕ ಪ್ರೊ| ವೇದವ್ಯಾಸ ರಾಮಕುಂಜ, ಶ್ರೀ ರಾಮಕುಂಜೇಶ್ವರ ವಿದ್ಯಾ ವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌. ಮಾತನಾಡಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ, ದಶಮಾನೋತ್ಸವ ಸಂಭ್ರಮ ಸಮಿತಿ ಕೋಶಾಧಿಕಾರಿ ಲಕ್ಷ್ಮೀನಾರಾಯಣ ರಾವ್‌ ಆತೂರು ಉಪಸ್ಥಿತರಿದ್ದರು.

Advertisement

ಪ್ರಾಂಶುಪಾಲ ಡಾ| ಸಂಕೀರ್ತ ಹೆಬ್ಟಾರ್‌ ಸ್ವಾಗತಿಸಿ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಆಚಾರ್‌ ಇಜ್ಜಾವು ಪ್ರಸ್ತಾವನೆಗೈದರು. ಉಪನ್ಯಾಸಕ ಲತನ್‌ ರೈ ಪರಿಚಯಿಸಿದರು. ಉಪನ್ಯಾಸಕ ಮೋಹನ ಕಲ್ಲೂರಾಯ ನಿರೂಪಿಸಿ, ಉಪನ್ಯಾಸಕ ಗುರುಕಿರಣ್‌ ವಂದಿಸಿದರು.

ಗೌರವಾರ್ಪಣೆ
ಎಸ್‌.ಎಲ್‌. ಭೋಜೇಗೌಡ, ಎಸ್‌.ಕೆ. ಆನಂದ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಹಾವಿದ್ಯಾಲಯದ ಅಭಿವೃದ್ಧಿಗೆ ಸಹಕರಿಸಿದ ಮಾಧವ ಆಚಾರ್‌ ಇಜ್ಜಾವು, ಶೇಷಪ್ಪ ರೈ, ಟಿ. ನಾರಾಯಣ ಭಟ್, ದುರ್ಗಾಪ್ರಸಾದ್‌ ಸುಣ್ಣಾಲ, ಪ್ರೊ| ವೇದವ್ಯಾಸ ರಾಮಕುಂಜ ಹಾಗೂ ಉಪನ್ಯಾಸಕರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಉಪನ್ಯಾಸಕಿ ರಮ್ಯಾ ಪ್ರತಿಭಾವಂತ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ದಶಮಾನೋತ್ಸವದ ಸವಿನೆನಪಿಗಾಗಿ ಹೊರತಂದ ದಶ ಪ್ರಣತಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು

ಸಿದ್ಧಗಂಗಾ ಮಠದ‌ ಮಾದರಿಯಲ್ಲಿ ವಿದ್ಯಾಸಂಸ್ಥೆ
ಮಠದ ವತಿಯಿಂದ ರಾಜ್ಯದ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿವೆ. ಗ್ರಾಮೀಣ ಪ್ರದೇಶ ವಾದ ರಾಮಕುಂಜದಲ್ಲಿರುವ ವಿದ್ಯಾಸಂಸ್ಥೆ ಯಲ್ಲಿ ಹಾಸ್ಟೆಲ್‌ ಸಹಿತ ಇನ್ನೂ ಹೆಚ್ಚಿನ ಸೌಕರ್ಯ, ಸೌಲಭ್ಯ ನೀಡಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾಸಂಸ್ಥೆಯ ಮಾದರಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಸಂಕಲ್ಪವಿದೆ. ಈ ಮೂಲಕ ರಾಮಕುಂಜ ರಾಜ್ಯದಲ್ಲಿಯೇ ಮಾದರಿ ವಿದ್ಯಾಸಂಸ್ಥೆಯಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು. ಚಿಕ್ಕಮಗ ಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೊಡಿಸಿದ 5 ಎಕ್ರೆ ಜಾಗದಲ್ಲಿ ನಡೆಯುತ್ತಿರುವ ಮಠದ ವಿದ್ಯಾಸಂಸ್ಥೆಯನ್ನು ವಸತಿ ಶಾಲೆಯನ್ನಾಗಿ ಪರಿವರ್ತಿಸುವ ಚಿಂತನೆಯೂ ಇದೆ ಎಂದು ಪೇಜಾವರ ಶ್ರೀಗಳು ಹೇಳಿದರು.

5 ಲಕ್ಷ ರೂ. ಅನುದಾನ
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಆದರೆ ವ್ಯಾವಹಾರಿಕವಾಗಿ ಇಂಗ್ಲಿಷ್‌ ಕಲಿಕೆಯೂ ಅಗತ್ಯವಿದೆ. ಈ ನಿಟ್ಟಿನಲ್ಲಿಯೇ ಸರಕಾರ ಪ್ರಾಯೋಗಿಕವಾಗಿ 1,000 ಶಾಲೆ ಗಳಲ್ಲಿ ಆಂಗ್ಲಭಾ ಷೆಯಲ್ಲಿ ಶಿಕ್ಷಣ ಆರಂಭಿ ಸುತ್ತಿದೆ. ಅದಕ್ಕೆ ಸಾಹಿತಿಗಳು ವಿರೋಧ ಸರಿಯಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಲಭಿಸಬೇಕು ಎಂದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ರೀ ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪ ಡಿಸಿದ ಭೋಜೇಗೌಡರು, ಸಂಸ್ಥೆಯ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next