Advertisement

ಕಡಬ: ಪ್ರತಿಷ್ಠಾ ವಾರ್ಷಿಕೋತ್ಸವ

04:33 PM May 19, 2018 | Team Udayavani |

ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ಜರಗಿತು. ಬೆಳಗ್ಗೆ ಗಣಪತಿ ಹೋಮ, ಚಂಡಿಕಾ ಯಾಗ ಪ್ರಾರಂಭಗೊಂಡು ಪಂಚ ವಿಂಶತಿ ಕಲಶಪೂಜೆ ನೆರವೇರಿತು. ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಸುವಾಸಿನೀ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ ನಡೆದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

Advertisement

ಶ್ರೀ ದೇವರಿಗೆ ರಂಗಪೂಜೆ ನೆರವೇರಿತು. ಕಡಬದ ವಿದ್ಯಾನಗರದ ರಾಮ ಭಟ್‌ ಮತ್ತು ಮಕ್ಕಳು ಸೇವಾ ರೂಪದಲ್ಲಿ ಸುಮಾರು 74 ಸಾವಿರ ರೂ. ಮೌಲ್ಯದ ಕಂಚಿನ ಘಂಟೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸದಸ್ಯರಾದ ನೀಲಾವತಿ ಶಿವರಾಮ, ಶಾಲಿನಿ ಸತೀಶ್‌ ನಾಯಕ್‌,ಮೋನಪ್ಪ ಕುಂಬಾರ, ತಮ್ಮಯ್ಯ ನಾ„ಕ್‌, ಆನಂದ, ಧರಣೇಂದ್ರ ಜೈನ್‌, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್‌., ರಾಜೇಂದ್ರ ಹೆಗ್ಡೆ ಕಡಬ ಗುತ್ತು, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯಕ್‌ ಜಿನ್ನಪ್ಪ ಸಾಲ್ಯಾನ್‌, ಮೇದಪ್ಪ ಗೌಡ, ನಾರಾಯಣ ಗೌಡ ಅಲುಂಗೂರು ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಹಾಗೂ ಪ್ರಶಾಂತ್‌ ಕೆದಿಲಾಯ ಪೂಜೆ ವಿಧಿ ವಿಧಾನ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next