Advertisement

ಕಡಬ:ಸುತ್ತಾಡಲು ಬಂದು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು!

11:24 AM Feb 09, 2018 | |

ಕಡಬ: ಮನೆಯವರಿಗೆ ತಿಳಿಸದೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಬಂದು ಊರಿಗೆ ಹಿಂದಿರುಗಲು ದುಡ್ಡಿಲ್ಲದೆ ನೆಟ್ಟಣ ರೈಲು ನಿಲ್ದಾಣದಲ್ಲಿ ಕಂಗಾಲಾಗಿ ಕುಳಿತಿದ್ದ ಹಾಸನ ಮೂಲದ ಯುವ ಪ್ರೇಮಿಗಳನ್ನು ಕಡಬ ಪೊಲೀಸರು ಠಾಣೆಗೆ ಕರೆದೊಯ್ದು ಕುಳ್ಳಿರಿಸಿದ ಘಟನೆ ಗುರುವಾರ ಸಂಭವಿಸಿದೆ.

Advertisement

ಹಾಸನ ನಿವಾಸಿ ಯುವಕ ನೂತನ್‌ ಹಾಸ್ಟೆಲ್‌ನಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದ ತನ್ನ ಪ್ರೇಯಸಿಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ರೈಲಿನಲ್ಲಿ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಪ್ರೇಮಿಗಳಿಗೆ ತಮ್ಮ ಕೈಯಲ್ಲಿದ್ದ ದುಡ್ಡು ಖಾಲಿಯಾದದ್ದೇ ತಿಳಿಯಲಿಲ್ಲ. ಕೊನೆಗೆ ಊಟಕ್ಕೆ ಹಾಗೂ ಊರಿಗೆ ಹಿಂದಿರುಗಲು ದುಡ್ಡಿಲ್ಲದೆ ಕಂಗಾಲಾಗಿ ಕುಳಿತಿದ್ದ ಅವರು ಸ್ಥಳೀಯರ ಕಣ್ಣಿಗೆ ಬಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಅವರಿಬ್ಬರೂ ಮನೆಯವರಿಗೆ ತಿಳಿಸದೆ ಬಂದಿರುವುದು ಬೆಳಕಿಗೆ ಬಂತು. ಬಳಿಕ ಕಡಬ ಪೊಲೀಸರಿಗೆ ವಿಚಾರ ಸುದ್ದಿ ಮುಟ್ಟಿಸಲಾಯಿತು. ಪ್ರೇಮಿಗಳನ್ನು ಠಾಣೆಗೆ ಕರೆತಂದ ಪೊಲೀಸರು ಅವರ ಹೆತ್ತವರಿಗೆ ವಿಚಾರ ತಿಳಿಸಿದರು. ಸಂಜೆಯ ವೇಳೆಗೆ ಠಾಣೆಗೆ ಬಂದ ಅವರ  ಹೆತ್ತವರು ಮುಚ್ಚಳಿಕೆ ಬರಕೊಟ್ಟು  ಊರಿಗೆ ಕರೆದೊಯ್ದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next