Advertisement

ಕಡಬ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

08:48 PM Jan 14, 2023 | Team Udayavani |

ಕಡಬ: ಪ್ರಕರಣವೊಂದಕ್ಕೆ ಸಂಬಂಧಿ 33 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಕಡಬ ಪೊಲೀಸರು ಮೈಸೂರಿನಲ್ಲಿ ಪತ್ತೆಹಚ್ಚಿ ಶುಕ್ರವಾರ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

Advertisement

ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಕ್ವೆ ನಿವಾಸಿ ದೇವಪ್ಪ ಗೌಡ ಅವರ ಪುತ್ರ ಹರಿಪ್ರಸಾದ್‌ ಬಂಧಿತ ಆರೋಪಿ. ಕಡಬ ಠಾಣೆಯಲ್ಲಿ ಆತನ ವಿರುದ್ದ 341,326,506 ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆತ ತಲೆ ಮರೆಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಪೊಲೀಸರು ಆರೋಪಿಯ ಮೊಬೆ„ಲ್‌ ಸಂಖ್ಯೆ ಪತ್ತೆಹಚ್ಚಿ ಆತನಿಗೆ ಕರೆ ಮಾಡಿದಾಗ ಆತ ಉಡಾಫೆಯಿಂದ ಪ್ರತಿಕ್ರಿಯಿಸುತ್ತಿದ್ದ ಎನ್ನಲಾಗಿದೆ. ನಿವೃತ್ತ ಯೋಧನಾಗಿರುವ ಆತ ನಿವೃತ್ತಿಯ ಬಳಿಕ ಕಳೆದ 3 ವರ್ಷಗಳಿಂದ ಮೈಸೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ. ಆತನ ಚಲನವಲದ ಬಗ್ಗೆ ನಿಗಾ ಇಟ್ಟಿದ್ದ ಕಡಬ ಪೊಲೀಸರು ಆರೋಪಿ ಇತ್ತೀಚೆಗೆ ಊರಿಗೆ ಬಂದು ಹೋಗಿದ್ದ ಕುರಿತು ಮಾಹಿತಿ ಪಡೆದಿದ್ದರು. ಬಳಿಕ ಆರೋಪಿ ಮೈಸೂರಿನಲ್ಲಿ ಇರುವುದನ್ನು ಪತ್ತೆ ಹಚ್ಚಿ ಮೈಸೂರಿನಲ್ಲಿ ಬಂಧಿಸಿದ್ದಾರೆ.

ಪುತ್ತೂರು ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಮತ್ತು ಕಡಬ ಠಾಣಾ ಎಸ್‌ಐ ಆಂಜನೇಯ ರೆಡ್ಡಿ ನಿರ್ದೇಶನದಂತೆ ಕಡಬ ಠಾಣಾ ಸಿಬಂದಿಗಳಾದ ರಾಜು ನಾಯಕ್‌ ಮತ್ತು ಸಿರಾಜುದ್ದೀನ್‌ ಅವರು ಮೈಸೂರಿಗೆ ತೆರಳಿ ಕಾರ್ಯಾಚರಣೆ ನಡೆಸಿದ್ದರು. ನ್ಯಾಯಾಲಯವು ಆರೋಪಿಗೆ ಜ. 21 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಮಣಿಪಾಲದ ಸಂಸ್ಥೆಗಳಿಂದ ನಾಲ್ವರು ಸಾಧಕರಿಗೆ ಹೊಸ ವರ್ಷದ ಪುರಸ್ಕಾರ ಪ್ರದಾನ

Advertisement

Udayavani is now on Telegram. Click here to join our channel and stay updated with the latest news.

Next