Advertisement

Kadaba ಆಟೋ ರಿಕ್ಷಾ ಪಲ್ಟಿ; ಚಾಲಕ ಸಾವು

11:15 PM Oct 02, 2023 | Team Udayavani |

ಕಡಬ: ರಾಮಕುಂಜ ಮೂಲದ ಆಟೋ ರಿಕ್ಷಾ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಬಳಿ ಸ್ಕಿಡ್‌ ಆಗಿ ಪಲ್ಟಿಯಾದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.

Advertisement

ರಾಮಕುಂಜ ಗ್ರಾಮದ ಇರ್ಕಿ ನಿವಾಸಿ ಪದ್ಮಯ್ಯ ಮಡಿವಾಳ ಅವರ ಪುತ್ರ ದಿನೇಶ್‌ (40) ಮೃತಪಟ್ಟವರು. ಅವರು ಬಜತ್ತೂರು ಕಡೆ ಬಾಡಿಗೆಗೆ ಹೋಗಿ ವಾಪಸಾಗುತ್ತಿದ್ದ ವೇಳೆ ಬಜತ್ತೂರು ಗ್ರಾಮದ ಪೆರಿಯಡ್ಕ-ಅಯೋಧ್ಯಾ ನಗರದಲ್ಲಿ ಆಟೋ ಸ್ಕಿಡ್‌ ಆಗಿ ಪಲ್ಟಿಯಾಗಿದೆ.

ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ರಾಮಕುಂಜ ಜಾತ್ರೋತ್ಸವ ಸಂದರ್ಭ ದೇವರ ಹಾಗೂ ದೈವಗಳ ಎದುರು ದೀವಟಿಕೆ ಹಿಡಿಯುವ ಸೇವೆ ಮಾಡುತ್ತಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next