Advertisement

ಸ್ವಾಮೀಜಿಯವರಿಂದ ಕಬಡ್ಡಿ ಕಬಡ್ಡಿ…

04:08 PM Oct 20, 2017 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ಆವರಣದಲ್ಲಿ ಬುಧವಾರ ದೀಪಾವಳಿ ತೈಲಾಭ್ಯಂಜನ ಸಂದರ್ಭ ಯತಿಗಳೂ ಮಠದ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿ ರಂಜಿಸಿದರು. ಕಬಡ್ಡಿ ಆಟ, ತೆಂಗಿನ ಕಾಯಿಯನ್ನು ಇಟ್ಟು ಎಲ್ಲರೂ ಕಿತ್ತು ಕೊಳ್ಳುವುದು, ಕೈಯಲ್ಲಿ ತೆಂಗಿನ ಕಾಯಿ ಒಡೆಯುವುದು ಇತ್ಯಾದಿ ಆಟಗಳನ್ನು ಆಡಲಾಯಿತು. 

Advertisement

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲೂ ವಿದ್ಯಾರ್ಥಿಗಳೊಂದಿಗೆ ಹಿಂದೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ದೀಪಾವಳಿ ಸಂದರ್ಭ ಮಕ್ಕಳೊಂದಿಗೆ ಬೆರೆಯುತ್ತಿದ್ದರು. ಅಲ್ಲಿ ಮೈದಾನದಲ್ಲೇ ಎಣ್ಣೆ ಹಚ್ಚಿ ಆಡಲಾಗುತ್ತಿತ್ತು. ಸಂಜೆ ಸಾರ್ವಜನಿಕರಿಂದ ಸುಡುಮದ್ದು ಕಾರ್ಯಕ್ರಮ ನಡೆ ಯುತ್ತಿತ್ತು. ಆದರೆ ಈಗ ಪರ್ಯಾಯ ಸಂದರ್ಭ ವಾದ್ದರಿಂದ ಒಂದು ತಂಡದ 30-40 ವಿದ್ಯಾರ್ಥಿ
ಗಳು ಶ್ರೀ ಕೃಷ್ಣಮಠದಲ್ಲಿದ್ದು ಓದುತ್ತಿದ್ದಾರೆ.
 
ಅವರಿಗಾಗಿ ದೀಪಾವಳಿ ಹಬ್ಬ ಆಚರಣೆ ನಡೆದಾಗ ಪೇಜಾವರ ಕಿರಿಯ ಶ್ರೀಗಳು, ಸೋದೆ ಶ್ರೀಗಳು, ಕಾಣಿಯೂರು ಶ್ರೀಗಳು, ವಿದ್ಯಾರ್ಥಿಗಳು ಆಟದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next