Advertisement

ಕಾರ ಹುಣ್ಣಿಮೆಗೆ ಮಣ್ಣಿನ ಜೋಡೆತ್ತು ಖರೀದಿ

04:35 PM Jun 24, 2021 | Team Udayavani |

ಬನಹಟ್ಟಿ: ಕೋವಿಡ್‌ ಸಂಕಷ್ಟದಲ್ಲಿಯೂ ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬುಧವಾರ ಕಾರು ಹುಣ್ಣಿಮೆ ಸಂಭ್ರಮ ಕಂಡು ಬಂದಿತು.

Advertisement

ಕಾರು ಹುಣ್ಣಿಮೆ ನಿಮಿತ್ತವಾಗಿ ಸ್ಥಳೀಯ ಹನುಮಾನ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಸಮೀಪದ ಹೊಸೂರ ಗ್ರಾಮದ ಹದಿನೈದಕ್ಕೂ ಹೆಚ್ಚು ಕುಂಬಾರರರ ಕುಟುಂಬಗಳು ಮಣ್ಣಿನ ಬಸವಣ್ಣನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡಿದರು.

ಕಳೆದ ಕೆಲವು ತಿಂಗಳಿಂದ ವ್ಯಾಪಾರ ಇಲ್ಲದೇ ಕುಂಬಾರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿದ್ದವು. ಇವತ್ತು ಎತ್ತಿನ ಮಾರಾಟ ಅವರ ಆರ್ಥಿಕತೆಗೆ ಸ್ವಲಪ್ಪ ಬಲ ನೀಡಿದಂತಾಗಿದೆ. ಬೆಳಗ್ಗೆ ಆರು ಗಂಟೆಗೆ ಆರಂಭವಾದ ಬಸವಣ್ಣನ ಮೂರ್ತಿಗಳ ಮಾರಾಟ ಸಂಜೆಯವರೆಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next