Advertisement

ಲೋಕಸಭೆಗೆ ಸ್ಪರ್ಧಿಸಲು ಕೆ.ಸುಧಾಕರ್ ‘ಕಾಂಗ್ರೆಸ್’ ಟಿಕೆಟ್ ಕೇಳಿದ್ದಾರೆ: ಪ್ರದೀಪ್ ಈಶ್ವರ್

02:22 PM Jul 29, 2023 | Team Udayavani |

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ.ಸುಧಾಕರ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಾಂಬ್ ಸಿಡಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ನಮ್ಮ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿರುವುದು ನಿಜ ಎಂದರು.

ಸುಧಾಕರ್ ಈ ಬಗ್ಗೆ ಇಲ್ಲ ಅಂತ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಪ್ರದೀಪ್ ಈಶ್ವರ್, ಆದರೆ ನಮ್ಮ ಪಕ್ಷದ ಕೆಲ ನಾಯಕರು ಅವರ ಭೇಟಿಗೆ ಸುಧಾಕರ್ ಗೆ ಅವಕಾಶ ನೀಡಿಲ್ಲ ಎಂದರು.

ಇದನ್ನೂ ಓದಿ:ಮದ್ಯಪಾನ ಮಾಡದಿದ್ದರೆ ನಾನು.. ʼಜೈಲರ್‌ʼ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ʼತಲೈವಾʼ ಮಾತು ವೈರಲ್

ಸುಧಾಕರ್ ಈಗಾಗಲೇ ಕಾಂಗ್ರೆಸ್ ಕದ ತಟ್ಟಿದ್ಸಾರೆ. ಆದರೆ ನಾವು ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದರು.

Advertisement

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂಬ ಸುಧಾಕರ್ ಹೇಳಿಕೆಗೆ ಪ್ರತಿಕ್ತಿಯೆ ನೀಡಿದ ಈಶ್ವರ್, ಒಮ್ಮೆ ಕಾಂಗ್ರೆಸ್ ಗೆ ದ್ರೋಹ ಮಾಡಿ ಬಿಜೆಪಿ ಸೇರಿದ್ದಾರೆ. ಈಗ ಮತ್ತೆ ಪಕ್ಷೇತರರಾಗಿ ಚುನಾವಣೆಗೆ ನಿಲ್ಲೋಣ ಅಂತ ಹೇಳುತ್ತಿದ್ಸಾರೆ. ಯಾಕೆ ಸುಧಾಕರ್ ಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲವೇ ಎಂದು ಪ್ರಶ್ನಿಸಿದರು.

ಬುಲೆಟ್ ಗೆ ಏಕೆ ಗನ್: ಅಧಿಕಾರ ಇದ್ದಾಗ ತಗ್ಗಿಬಗ್ಗಿ ನಡೆಯಬೇಕು. ನಾನು ಒಬ್ಬ ಶಾಸಕ, ಇಲ್ಲಿವರೆಗೂ ಗನ್ ಮ್ಯಾನ್ ಇಟ್ಟುಕೊಂಡಿಲ್ಲ. ಅವರು ಶಾಸಕರಿದ್ದಾಗ ಎಸ್ಕಾರ್ಟ್ ಪೊಲೀಸರನ್ನು ಬಳಸುತ್ತಿದ್ದರು. ಆದರೆ ನಾನು ಎಲ್ಲಿ ಬಂದರೂ ಪೊಲೀಸರಿಗೂ ಹೇಳಲ್ಲ. ಬುಲೆಟ್ ಗೆ ಏಕೆ ಗನ್ ಎಂದು ಪ್ರದೀಪ್ ಈಶ್ವರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next