Advertisement

40% ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ವಿಚಾರ ಬಹಿರಂಗ ಪಡಿಸಲಿ : ಈಶ್ವರಪ್ಪ

07:54 PM Jun 28, 2022 | Team Udayavani |

ಶಿವಮೊಗ್ಗ : 40 ಪರ್ಸೆಂಟ್ ಕಮಿಷನ್ ಕೊಟ್ಟು ಯಾರು ಗುತ್ತಿಗೆಯನ್ನು ಪಡೆದಿದ್ದಾರೆ ಅವರು ನೇರವಾಗಿ ವಿಚಾರ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

40 ಪರ್ಸೆಂಟ್ ಕಮಿಷನ್ ಬಗ್ಗೆ ಕೇಂದ್ರದಿಂದ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾವ ಇಲಾಖೆ, ಯಾವ ಮಂತ್ರಿ, ಯಾವ ಶಾಸಕ ಪರ್ಸೆಂಟೇಜ್ ಕೇಳಿದ್ರು ? ಯಾವ ಗುತ್ತಿಗೆದಾರನಿಗೆ, ಯಾವ ಕಾಮಗಾರಿಗೆ ಕೇಳಿದ್ರು? ಇದರಲ್ಲಿ ಯಾರಾದರೂ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ ಹಾಗಾಗಿ ಯಾರಾದ್ರೂ ಕಮಿಷನ್ ಕೊಟ್ಟಿದ್ದರೆ ಅದನ್ನು ಮೊದಲು ಬಹಿರಂಗಪಡಿಸಲಿ ಇಲ್ಲವಾದ್ರೇ ಇದು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆ ರೀತಿ ಆಗುತ್ತೆ. ಅನ್ಯವ್ಯಕ್ತಿಗಳ ರಾಜಕೀಯ ಕುಮ್ಮಕ್ಕಿನಿಂದ ಪತ್ರ ಬರೆದರಾ ಎಂಬ ಪ್ರಶ್ನೆ ಕೂಡಾ ಜನರಿಗೆ ಎದುರಾಗುತ್ತೆ? ಅಲ್ಲದೆ ರಾಜಕೀಯ ದಾಳಕ್ಕೆ ಗುತ್ತಿಗೆದಾರರ ಸಂಘ ಇದಿಯೋ ಎಂಬ ಅನುಮಾನ ಆರಂಭವಾಗುತ್ತೆ ಎಂದರು.

ಗುತ್ತಿಗೆದಾರರ ಸಂಘದ ಕೆಂಪಣ್ಣ ಬಳಿ ದಾಖಲೆಯಿದೆ ಎಂದು ಬಹಳ ಹಿಂದಿನಿಂದ ಹೇಳ್ತಾ ಇದ್ದಾರೆ. ಈ ಹಿಂದೆ ಸಿಎಂ ಜೊತೆ ಕೂಡಾ ಅವರು ಸಭೆ ನಡೆಸಿದ್ದಾರೆ. ಆಗಲೂ ಕೆಂಪಣ್ಣ ಬಾಯಿ ಬಿಟ್ಟಿಲ್ಲ. ಪ್ರಧಾನಿ ಕಚೇರಿಯಿಂದ ಕರೆ ಬಂದ ಮೇಲೆ ಮತ್ತೆ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾಗಿ ಯಾರು ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ವಿಷಯ ಬಹಿರಂಗ ಪಡಿಸಲಿ ಎಂದರು.

ದಾಖಲೆ ಇವರ ಬಳಿ ಇಟ್ಟುಕೊಂಡು ಕೂತರೇ ಯಾವುದೇ ಲಾಭ ಇಲ್ಲ. ಇಲ್ಲವಾದಲ್ಲಿ ಇದು ಕೇವಲ ರಾಜಕೀಯ ಷಡ್ಯಂತ್ರವಾಗಿ ಉಳಿಯುತ್ತೆ. ಸತ್ಯಾಂಶ ಇದ್ದರೇ ವಿಷಯ ಎಲ್ಲವೂ ಹೊರಗೆ ಬರುತ್ತೆ ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next