Advertisement

ಮುಂದಿನ ಸಿಎಂ ಲಿಂಗಾಯತ-ನಾನ್‌ ಲಿಂಗಾಯತ ಎಂಬುದು ಮಾಧ್ಯಮಗಳ ಸೃಷ್ಟಿ : ಈಶ್ವರಪ್ಪ

04:09 PM Jul 23, 2021 | Team Udayavani |

ದಾವಣಗೆರೆ : ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಫೈನಲ್‌. ಮುಖ್ಯಮಂತ್ರಿ ಬದಲಾವಣೆ ತಮ್ಮ ಪ್ರಯತ್ನದ ಫಲ ಎನ್ನುತ್ತಿರುವ ಸಿಪಿವೈ, ಯತ್ನಾಳ್‌ ಏನಾದ್ರೂ ಹೇಳಿಕೊಳ್ಳಲಿ, ನಾನು ಏನು ಮಾಡೋಕೆ ಆಗೊಲ್ಲ ಎಂದು  ದಾವಣಗೆರೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮುಂದಿನ ಸಿಎಂ ಯಾರು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಲಿಂಗಾಯತ ಅಥವ ನಾನ್‌ ಲಿಂಗಾಯತ ಎಂಬುದು ಮಾಧ್ಯಮಗಳ ಸೃಷ್ಟಿ. ರಾಜ್ಯದ ಪ್ರಮುಖರು ಮುಖ್ಯಮಂತ್ರಿ ಆಗ್ತಾರೆ ಎಂದರು.

ಹಾಲುಮತ ಮಹಾಸಭಾದಿಂದ ಈಶ್ವರಪ್ಪ ಸಿಎಂ ಆಗಲಿ ಎಂಬ ಲಾಬಿ ಬಗ್ಗೆ ಮಾತನಾಡಿದ ಅವರು, ನನ್ನ ಬಗ್ಗೆ ಆಸಕ್ತಿ ಹಾಗೂ ಪ್ರೀತಿಯಿಂದ ಕೇಳ್ತಾರೆ. ಅವರ ಪ್ರೀತಿಗೆ ಸಂತೋಷ ಪಡುತ್ತೇನೆ. ಇಂಥ ಪ್ರಯತ್ನ ಮಾಡಬೇಡಿ ಎಂದು ನಾನು ಹೇಳ್ತೇನೆ. ಕೇಂದ್ರದ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೊ ಅದಕ್ಕೆ ರಾಜ್ಯದ ಎಲ್ಲ ಕಾರ್ಯಕರ್ತರು ಬದ್ಧವಾಗಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next