Advertisement

ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

03:17 PM Mar 09, 2021 | Team Udayavani |

ನವ ದೆಹಲಿ : ಸಿಂದಿಯಾ ಬಿಜೆಪಿಯಲ್ಲಿ ಮೂಲೆ ಗುಂಪಾಗಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜ್ಯೋತಿರಾದಿತ್ಯ ಸಿಂದಿಯಾ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ನಾನು ಕಾಂಗ್ರೆಸ್ ನಲ್ಲಿರುವಾಗಲೇ  ರಾಹುಲ್ ಗಾಂಧಿ ಇದೇ ರೀತಿ ಕಾಳಜಿ ವಹಿಸಿದ್ದರೇ ಪರಿಸ್ಥಿತಿ ಬೇರೆನೆ ಆಗುತ್ತಿತ್ತು ಎಂದು ಸಿಂದಿಯಾ ಪ್ರತಿಕ್ರಿಸಿದ್ದಾರೆ.

ಕಮಲ ನಾಥ್ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕಳೆದ ವರ್ಷದ ಮಾರ್ಚ್ ನಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷವನ್ನು ಜ್ಯೋತಿರಾದಿತ್ಯ ಸಿಂದಿಯಾ ಪ್ರಮುಖ ಪಾತ್ರವಹಿಸಿದ್ದರು ಎಂಬ ಸುದ್ದಿಗಳು ಆಗ ಸುದ್ದಿಯಾಗಿತ್ತು.

ಓದಿ :  ಮಂಗಳೂರು: ತೈಲಬೆಲೆ ಏರಿಕೆ ವಿರೋಧಿಸಿ ನೇಣುಹಗ್ಗ ಪ್ರದರ್ಶಿಸಿ ಪ್ರತಿಭಟನೆ!

ಸೋಮವಾರ(ಮಾ.8) ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಯುವ ವಿಭಾಗದೊಂದಿಗೆ ನಡೆಸಿದ ಸಭೆಯಲ್ಲಿ ಪಕ್ಷದ ಮಹತ್ವವನ್ನು ತಿಳಿಸುವಾಗ ತಮ್ಮ ಒಂದು ಕಾಲದ ಆಪ್ತರ(ಜ್ಯೋತಿರಾದಿತ್ಯ) ಬಗ್ಗೆ ಮಾತನಾಡಿದ್ದಾರೆ.

Advertisement

ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ, ಮುಖ್ಯಮಂತ್ರಿಯಾಗಬಹುದಿತ್ತು, ನಾನು ಕೂಡ ಖುದ್ದಾಗಿ ಹೇಳಿದ್ದೇನೆ. ಆದರೇ, ಅವರು ಬೇರೆ ಮಾರ್ಗವನ್ನು ಕಂಡುಕೊಂಡರು ಎಂದು ರಾಹುಲ್ ಗಾಂಧಿ ನಿನ್ನೆ(ಸೋಮವಾರ, ಮಾ.8) ಹೇಳಿದ್ದರು.

ಬರೆದಿಟ್ಟುಕೊಳ್ಳಿ, ಸಿಂದಿಯಾ ಬಿಜೆಪಿಯಿಂದ ಮುಖ್ಯಮಂತ್ರಿ ಎಂದಿಗೂ ಆಗುವುದಿಲ್ಲ. ಅದಕ್ಕಾಗಿ ಅವರು ಮರಳಿ ಇಲ್ಲಿಗೆ ಬರಬೇಕಾಗುತ್ತದೆ ಎಂದು ಸಹ ಗಾಂಧಿ ಹೇಳಿದ್ದರು.

ಓದಿ :  ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

Advertisement

Udayavani is now on Telegram. Click here to join our channel and stay updated with the latest news.

Next