Advertisement

ಮಧುಕರ್‌ ಶೆಟ್ಟಿ ಸ್ಮಾರಕ: ನ್ಯಾ|ಹೆಗ್ಡೆ ಆಗ್ರಹ 

04:51 AM Dec 30, 2018 | Team Udayavani |

ಮಂಗಳೂರು: ದಕ್ಷ ಹಾಗೂ ಪ್ರಾಮಾಣಿಕ ಐಪಿಎಸ್‌ ಅಧಿಕಾರಿ ಡಾ| ಮಧುಕರ್‌ ಶೆಟ್ಟಿ ಅವರ ನೆನಪನ್ನು ಅಜರಾಮರವಾಗಿಸಲು ರಾಜ್ಯ ಸರಕಾರ ಅವರ ಹೆಸರಿನಲ್ಲಿ ಸ್ಮಾರಕ ಸ್ಥಾಪಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಒತ್ತಾಯಿಸಿದ್ದಾರೆ.

Advertisement

ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸರಕಾರ ಮಧುಕರ ಶೆಟ್ಟಿ ಅವರಂತಹ ವ್ಯಕ್ತಿಗಳ ಜೀವನಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಅವರ ನೆನಪಲ್ಲಿ ಸ್ಮಾರಕವನ್ನು ನಿರ್ಮಿಸಬೇಕು; ಅದಕ್ಕೆ ನಾನೂ ಆರ್ಥಿಕ ಸಹಾಯ ಒದಗಿಸುತ್ತೇನೆ ಎಂದರು. ಮಧುಕರ್‌ ಶೆಟ್ಟಿ ಅವರ ಸಾವಿನಿಂದ ತುಂಬಾ ನೋವಾಗಿದೆ. ಇವತ್ತಿನ ಸಾಮಾಜಿಕ ಹಿನ್ನೆಲೆಯಲ್ಲಿ ಪ್ರಾಮಾಣಿಕ, ದಕ್ಷ ವ್ಯಕ್ತಿಗಳು ಬಹಳ ಕಡಿಮೆ. ಯಾವುದೇ ಆಮಿಷಕ್ಕೆ ಒಳಗಾಗದೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಕಾರಣ  ಪದೇ ಪದೆ ವರ್ಗಾವಣೆಯಾಗುತ್ತಿದ್ದರು. ನಾನು ಅವರನ್ನು ಲೋಕಾಯುಕ್ತಕ್ಕೆ ಬನ್ನಿ ಎಂದು ಕೇಳಿಕೊಂಡ ಬಳಿಕ ಅಲ್ಲಿಗೆ ಬಂದರು ಎಂದು ವಿವರಿಸಿದರು. 

ವೀರಪ್ಪನ್‌ ಪ್ರಕರಣದಲ್ಲಿ ಎಸ್‌ಐಟಿಯಲ್ಲಿದ್ದಾಗ ಸರಕಾರ ಅವರಿಗೆ ಸೈಟ್‌ ಕೊಡಲು ನಿರ್ಧರಿಸಿತ್ತು. ಆದರೆ ಅವರು ನಿರಾಕರಿಸಿ, “ನನ್ನ ಕೆಲಸಕ್ಕೆ ಸಂಬಳ ಕೊಟ್ಟಿದ್ದೀರಿ’ ಎಂದಿದ್ದರು. ಗಣಿ ವಿಚಾರಣೆಯಲ್ಲೂ ಧೈರ್ಯ, ನೈಪುಣ್ಯ ತೋರಿದ್ದರು. 47 ವರ್ಷದ ಯುವಕ ಐಜಿ ರ್‍ಯಾಂಕ್‌ವರೆಗೂ ಬಂದಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next