Advertisement

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

10:11 PM May 18, 2021 | Team Udayavani |

ನವದೆಹಲಿ: ಐಪಿಎಸ್‌ ಅಧಿಕಾರಿ ಪರಂ ಬೀರ್‌ ಸಿಂಗ್‌ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಮಹಾರಾಷ್ಟ್ರದಿಂದ ಹೊರಗೆ ನಡೆಸಬೇಕು ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ಆರ್‌.ಗವಾಯ್‌ ಹಿಂದೆ ಸರಿದಿದ್ದಾರೆ.

Advertisement

ಪ್ರಕರಣದ ವಿಚಾರಣೆ ನ್ಯಾ.ವಿನೀತ್‌ ಶರಣ್‌ ಮತ್ತು ನ್ಯಾ.ಬಿ.ಆರ್‌.ಗವಾಯ್‌ ನೇತೃತ್ವದ ನ್ಯಾಯಪೀಠದ ಮುಂದೆ ನಡೆಯಬೇಕಾಗಿತ್ತು. ಮಂಗಳವಾರ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನ್ಯಾ.ವಿನೀತ್‌ ಶರಣ್‌ ಮಾತನಾಡಿ “ಈ ಪ್ರಕರಣದ ವಿಚಾರಣೆ ನಡೆಸುವಲ್ಲಿ ನ್ಯಾ.ಬಿ.ಆರ್‌.ಗವಾಯಿ ಅವರಿಗೆ ಕೊಂಚ ಅನನುಕೂಲವಾಗಿದೆ.

ಹೀಗಾಗಿ, ಅದನ್ನು ಮತ್ತೂಂದು ಪೀಠಕ್ಕೆ ವರ್ಗಾಯಿಸಲಾಗುತ್ತದೆ’ ಎಂದರು. ಇದೇ ಸಂದರ್ಭದಲ್ಲಿ ಐಪಿಎಸ್‌ ಅಧಿಕಾರಿ ಸಿಂಗ್‌ ಪರ ವಾದಿಸಿದ ನ್ಯಾಯವಾದಿ ಪುನೀತ್‌ ಬಾಲಿ ತಮ್ಮ ಕಕ್ಷಿದಾರನ ವಿರುದ್ಧದ ಪ್ರಕರಣ ಪೂರ್ವಗ್ರಹ ಪೀಡಿತವಾದದ್ದು ಎಂದರು.

ಇದನ್ನೂ ಓದಿ :ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next