Advertisement

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕರ್ನಾಟಕದ ನ್ಯಾ.ಅರವಿಂದ್‌ ಪದಗ್ರಹಣ

10:07 PM Feb 13, 2023 | Team Udayavani |

ನವದೆಹಲಿ: ಕರ್ನಾಟಕದವರಾದ ನ್ಯಾ. ಅರವಿಂದ್‌ ಕುಮಾರ್‌ ಸೇರಿದಂತೆ ಇಬ್ಬರು ನ್ಯಾಯಮೂರ್ತಿಗಳು ಸೋಮವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

ನ್ಯಾ.ಅರವಿಂದ್‌ ಹಾಗೂ ನ್ಯಾ.ರಾಜೇಶ್‌ ಬಿಂದಾಲ್‌ ಅವರಿಗೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಪ್ರಮಾಣ ವಚನ ಬೋಧಿಸಿದ್ದಾರೆ. ಹೊಸ ನ್ಯಾಯಮೂರ್ತಿಗಳ ಸೇರ್ಪಡೆಯೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಖಾಲಿ ಉಳಿದಿದ್ದ ಎಲ್ಲ ಹುದ್ದೆಗಳು ಪೂರ್ಣಗೊಂಡಂತಾಗಿದ್ದು, ಇದರೊಂದಿಗೆ ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ಸುಪ್ರೀಂಗೆ ನೇಮಕಗೊಳ್ಳುವ ಮುಂಚೆ ನ್ಯಾ. ಮೂರ್ತಿ ಬಿಂದಾಲ್‌ ಅಲಹಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಹಾಗೂ ನ್ಯಾ.ಅರವಿಂದ್‌ ಅವರು ಗುಜರಾತ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next