Advertisement

ನ್ಯಾಯಾಧಿಕರಣವೇ ನಿರ್ಧರಿಸಲಿ: ಪರ್ರಿಕರ್‌

06:30 AM Feb 09, 2018 | Team Udayavani |

ಪಣಜಿ: ಕೇಂದ್ರ ಸರ್ಕಾರ ನಿಯುಕ್ತಿಗೊಳಿಸಿರುವ ಅಂತಾರಾಜ್ಯ ನೀರು ವಿವಾದ ನ್ಯಾಯಾಧಿಕರಣವೇ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆಗೆ ಸಂಬಂಧಿಸಿದಂತೆ ನಿರ್ಧರಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌  ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನಾವು ನ್ಯಾಯಾಧಿ ಕರಣದಲ್ಲಿ ಹೋರಾಟ ನಡೆಸುತ್ತೇವೆ. ಮಹದಾಯಿ ವಿಷಯದಲ್ಲಿ ನಿಮಗೇಕೆ ಎಲ್ಲ ವಿಷಯಗಳಿಗೆ ಉತ್ತರಿಸಬೇಕು ಎಂದು ಹರಿಹಾಯ್ದರು. ಮಹದಾಯಿ ನದಿ ನೀರು ಹಂಚಿಕೆಗೆ ಮಾತುಕತೆಗೆ ಸಿದ್ಧ ಎಂದು ಕರ್ನಾಟಕಕ್ಕೆ ಪತ್ರ ಬರೆದಿದ್ದ ಗೋವಾ ಸಿಎಂ ಈಗ ಯೂ ಟರ್ನ್ ಹೊಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next