Advertisement

ಅಗ್ನಿಕೊಂಡ ಮಹೋತ್ಸವ

06:57 PM Mar 05, 2021 | Team Udayavani |

ಹೊಸದುರ್ಗ: ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವರ ನೂತನ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಗ್ನಿಕೊಂಡ ಮಹೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು.

Advertisement

ಬೆಳಿಗ್ಗೆ ಮೂಲ ದೇವರಿಗೆ ರುದ್ರಾಭಿಷೇಕ ನಡೆಸಿ ನಂತರ ಸುಮಾರು 21 ಕೆಜಿ ಬೆಳ್ಳಿಯಿಂದ ತಯಾರಿಸಲಾಗಿರುವ ನೂತನ ಉತ್ಸವ ಮೂರ್ತಿಗೆ ಪ್ರಾಣ ಪ್ರತಿಷ್ಠೆ ನೀಡಲಾಯಿತು. ರಾತ್ರಿ ಸುಗಮ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗಿದವು.

ಬ್ರಾಹ್ಮಿ ಮೂಹೂರ್ತದಲ್ಲಿ ಗುರು ಒಪ್ಪತ್ತಿನಸ್ವಾಮಿ ವಿರಕ್ತ ಮಠದಿಂದ ಗಂಗಾಪೂಜೆ ಮುಗಿಸಿಕೊಂಡು ಉತ್ಸವದೊಂದಿಗೆ ವೀರಭದ್ರಸ್ವಾಮಿ ದೇಗುಲಕ್ಕೆ ಬರುವ ಮೂಲಕ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಅಗ್ನಿಗೊಂಡ ಪ್ರವೇಶ ಮಾಡಲಾಯಿತು. ಮಧಾಹ್ನ ಅನ್ನಸಂತರ್ಪಣೆ ನಡೆಯಿತು.

ನಂತರ ಗ್ರಾಮ ದೇವತೆ ದುರ್ಗಾಂಬಿಕಾ ದೇವಿ ಹಾಗೂ ವೀರಭದ್ರಸ್ವಾಮಿ ದೇವರುಗಳ ರಾಜ ಬೀದಿ ಉತ್ಸವ ಮೂಲಕ ಈಶ್ವರ ದೇವಾಲಯಕ್ಕೆ ಬೀಳ್ಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next