Advertisement

ಸಿಎಂ ಖಟ್ಟರ್‌ ಭದ್ರತೆಗಾಗಿ ದೂರ ನಿಲ್ಲಿ: ಮಾಧ್ಯಮದವರಿಗೆ ಸೂಚನೆ

03:33 PM Nov 15, 2017 | Team Udayavani |

ಹೊಸದಿಲ್ಲಿ : ”ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರಿಂದ ಸಾಕಷ್ಟು ದೂರ ನಿಂತು ಪ್ರಶ್ನೆಗಳನ್ನು ಕೇಳಬೇಕು; ಮೈಕ್ರೋಫೊನ್‌ಗಳನ್ನು ಅವರ ಮುಖದ ಸಮೀಪಕ್ಕೆ ಒಯ್ಯಬಾರದು; ಮುಖ್ಯಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಈ ಸೂಚನೆಗಳನ್ನು ಮಾಧ್ಯಮದವರು ಪಾಲಿಸುವುದು ಅಗತ್ಯವಿದೆ” ಎಂದು ಸೋನಿಪತ್‌ ಜಿಲ್ಲಾಡಳಿತ ಇಂದು ಅಧಿಸೂಚನೆಯನ್ನು ಹೊರಡಿಸಿದೆ.

Advertisement

ಪತ್ರಕರ್ತರು ಮತ್ತು ಕ್ಯಾಮರಾಮನ್‌ಗಳು ಮುಖ್ಯಮಂತ್ರಿಗಳ ತೀರ ನಿಕಟಕ್ಕೆ ಹೋಗಿ ಅವರ ಮುಖಕ್ಕೇ ಮೈಕ್ರೋಫೋನ್‌ ಹಿಡಿಯುವುದು ಸಿಎಂ ಭದ್ರತೆಯ ದೃಷ್ಟಿಯಿಂದ ಸಾಧುವಲ್ಲ; ಈ ರೀತಿಯ ಸಾಮಿಪ್ಯವನ್ನು ಮಾಧ್ಯಮದವರ ಸೋಗಿನಲ್ಲಿ ಯಾವುದೇ ಅಪಾಯಕಾರಿ ವ್ಯಕ್ತಿಗಳು ದುಲಾಭ ಪಡೆದು ಸಿಎಂ ಭದ್ರತೆಗೆ ಅಪಾಯ ಒಡ್ಡಲು ಸಾಧ್ಯವಿದೆ. ಆದುದರಿಂದ ಮಾಧ್ಯಮದವರು ಸಿಎಂ ಅವರಿಂದ ದೂರ ನಿಂತು ತಮ್ಮ ವರದಿಗಾರಿಕೆಯನ್ನು ಮಾಡಬೇಕು ಎಂದು ಅಧಿಸೂಚನೆ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next