Advertisement

ಮಾಧ್ಯಮ ಗಳಿಗಿಲ್ಲ ಕಿರುಕುಳ

06:00 AM Aug 04, 2018 | Team Udayavani |

ನವದೆಹಲಿ: ಖಾಸಗಿ ವಾಹಿನಿಗಳಿಗೆ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿದ ಆರೋಪವನ್ನು ಕೇಂದ್ರ ತಿರಸ್ಕರಿಸಿದೆ. ಲೋಕಸಭೆಯಲ್ಲಿ ಈ ವಿಚಾರ ಎತ್ತಿದ ಖರ್ಗೆ, ಸರ್ಕಾರದ ನಿಯಮಗಳನ್ನು ಟೀಕಿಸಿ ಕೆಲ ವರದಿ ಮಾಡಿದ್ದಕ್ಕೆ ಖಾಸಗಿ ವಾಹಿನಿಯೊಂದಕ್ಕೆ ಕೇಂದ್ರ ಸರ್ಕಾರ ಶೋಕಾಸ್‌ ನೋಟಿಸ್‌ ನೀಡಿದೆ. ಪರಿಣಾಮ, ವಾಹಿನಿಯ ಹಿರಿಯ ಕಾರ್ಯಕಾರಿ ಸಿಬ್ಬಂದಿ ಹಾಗೂ ಇಬ್ಬರು ಉದ್ಯೋಗಿಗಳು ರಾಜೀನಾಮೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.  ಇದಕ್ಕೆ ಉತ್ತರಿಸಿದ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, “”ಸಿಬ್ಬಂದಿ ರಾಜೀನಾಮೆಗೂ, ಸರ್ಕಾರಕ್ಕೂ ಸಂಬಂಧವಿಲ್ಲ. ಚಾನೆಲ್‌ನ ಟಿಆರ್‌ಪಿ (ರೇಟಿಂಗ್‌ ಅಂಕ) ಇಳಿಕೆಯಿಂದ ಆ ಸಿಬ್ಬಂದಿ ಹೊರಹೋಗಿರಬಹುದು” ಎಂಬ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಎಸ್‌ಸಿ/ಎಸ್‌ಟಿ ಕಾಯ್ದೆ ತಿದ್ದುಪಡಿ ವಿಧೇಯ ಕವನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ. ಕಾಯ್ದೆಯನ್ನು ನಿಸ್ಸಾರಗೊಳಿಸಿದ್ದ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಈ ತಿದ್ದುಪಡಿ ತರಲಾಗಿತ್ತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next