Advertisement

ಚುಡಾವಣೆ:ಹಾಡು ಹಗಲೇ ದಿಲ್ಲಿ ಪತ್ರಕರ್ತೆಯ ಬೆನ್ನಟ್ಟಿದ ಬೈಕ್‌ ಸವಾರರು

05:42 PM Jul 10, 2018 | Team Udayavani |

ಹೊಸದಿಲ್ಲಿ : ಪ್ರಮುಖ ಮಾಧ್ಯಮ ಸಂಸ್ಥೆಯೊಂದರಲ್ಲಿ ಪತ್ರಕರ್ತೆಯಾಗಿ ದುಡಿಯುತ್ತಿರುವ ನಿಕಿತಾ ಜೈನ್‌ ತಾನು ಕಾರಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಕೀಟಲೆಕೋರ ಬೈಕ್‌ ಸವಾರರು ಬೆದರಿಕೆ ಒಡ್ಡುವ ರೀತಿಯಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದು ಕಾರಿಗೆ ಹಾನಿ ಮಾಡಿದ್ದಾರೆ; ಈ ರೀತಿ ನಡೆಯುವ ಹುಡುಗಿಯರ ಚುಡಾವಣೆ ವಿರುದ್ಧ ದಿಲ್ಲಿ ಪೊಲೀಸರು ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಈ ವಿಷಯವನ್ನು ಟ್ಟಿಟರ್‌ ನಲ್ಲಿ ಬರೆದಿರುವ ನಿಕಿತಾ ಜೈನ್‌ ಅವರು, ನಾನು ನೋಯ್ಡಾ ಸೆ.16ಎ ಯಲ್ಲಿರುವ ಫಿಲಂ ಸಿಟಿಯಲ್ಲಿ ಕೆಲಸ ಮುಗಿಸಿಕೊಂಡು ಮರಳುವಾಗ ಬೈಕ್‌ ಸವಾರರಿಬ್ಬರು ನನ್ನನ್ನು ಬೆನ್ನಟ್ಟಿಕೊಂಡು ಬಂದರು. ನಾನು ಅವರನ್ನು ತಪ್ಪಿಸಲು ಪ್ರಯತ್ನಿಸಿದೆ; ಆದರೆ ಯಶಸ್ವಿಯಾಗಲಿಲ್ಲ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next