Advertisement

ಪತ್ರಕರ್ತನ ಬಂಧನ

06:05 AM Dec 20, 2018 | |

ಗುವಾಹಟಿ: ಮಣಿಪುರ ಮುಖ್ಯಮಂತ್ರಿ ಎನ್‌. ಬಿರೆನ್‌ ಸಿಂಗ್‌ರನ್ನು ಪ್ರಧಾನಿ ನರೇಂದ್ರ ಮೋದಿಯ ಕೈಗೊಂಬೆ ಎಂದು ದೂರಿದ್ದಕ್ಕೆ ಪತ್ರಕರ್ತ ಕಿಶೋರ್‌ಚಂದ್ರ ವಾಂಖೆಮ್‌ರನ್ನು ಬಂಧಿಸಲಾಗಿದೆ. ಬಿಜೆಪಿಯನ್ನು ಟೀಕಿಸಿ ಕಿಶೋರ್‌ಚಂದ್ರ ಹಲವು ವೀಡಿಯೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕಳೆದ ನವೆಂಬರ್‌ 21 ರಂದೇ ಇವರನ್ನು ಬಂಧಿಸಲಾಗಿದ್ದು, ಎರಡು ದಿನಗಳ ನಂತರ ಬಿಡುಗಡೆ ಮಾಡಿ ಪುನಃ ಬಂಧಿಸಲಾಗಿದೆ. ಅಂದಿನಿಂದಲೂ ವಿಚಾರಣೆಯನ್ನೇ ಮಾಡದೆ ಅವರನ್ನು ಇಂಫಾಲದಲ್ಲಿ ಜೈಲಿನಲ್ಲಿಡಲಾಗಿದೆ. ಈ ಸಂಬಂಧ ದೆಹಲಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next