Advertisement

Ayanur Manjunath: ಕೇಂದ್ರ ಸಚಿವ ಸ್ಥಾನಕ್ಕೆ ಜೋಶಿ ರಾಜೀನಾಮೆ ನೀಡಲಿ: ಆಯನೂರು

09:25 PM Oct 19, 2024 | Suhan S |

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೆಸರು ಪ್ರಸ್ತಾವವಾಗಿದೆ. ಮಾತ್ರವಲ್ಲ, ಹಣಕಾಸು ವಹಿವಾಟು ಅವರ ಕಚೇರಿಯಲ್ಲಿಯೇ ನಡೆದಿದೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ತತ್‌ಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಒತ್ತಾಯಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಕರಣಕ್ಕೂ ಹಾಗೂ ಸಹೋದರ ಗೋಪಾಲ ಜೋಶಿಗೂ ತಮಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಪ್ರಕರಣದಲ್ಲಿರುವ ವಿಜಯಲಕ್ಷ್ಮೀ ತಮ್ಮ ಸಹೋದರಿಯೇ ಅಲ್ಲ ಎಂದಿದ್ದಾರೆ. ಹಾಗಾದರೆ ಟಿಕೆಟ್‌ ಕೊಡಿಸುವುದಾಗಿ ನಡೆಸಿದ ಹಣದ ವಹಿವಾಟಿನ ಚಟುವಟಿಕೆಗಳು ಅವರದ್ದೇ ಕಚೇರಿಯಲ್ಲಿ ನಡೆದಿದ್ದು ಯಾಕೆ? ಅದಕ್ಕೆ ಜೋಶಿಯವರು ಉತ್ತರಿಸಲಿ ಎಂದು ಒತ್ತಾಯಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next