Advertisement

ಯುವತಿಯ ಹಾಲಿ ಪ್ರೇಮಿ ಕೊಂದ ಮಾಜಿ ಪ್ರಿಯಕರ

10:03 AM May 11, 2022 | Team Udayavani |

ಬೆಂಗಳೂರು: ಯುವತಿಯೊಬ್ಬಳ ಮಾಜಿ ಪ್ರಿಯಕರ ಸ್ನೇಹಿತರ ಜತೆಗೆ ಸೇರಿ ಆಕೆಯ ಹಾಲಿ ಪ್ರೇಮಿಗೆ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

Advertisement

ಬೊಮ್ಮನಹಳ್ಳಿಯ ಕಿರಣ್‌ (27), ಅರುಣ್‌(30), ರಾಕೇಶ್‌ (32) ಬಂಧಿತ ಆರೋಪಿಗಳು. ಹೊಂಗ ಸಂದ್ರದ ಸಮರ್ಥ್ ನಾಯರ್‌ ಕೊಲೆಯಾದ ವ್ಯಕ್ತಿ.

ಮಾಜಿ ಪ್ರಿಯಕರನಿಂದ ಕೊಲೆ

ಹೊಂಗಸಂದ್ರದ ನಿವಾಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸುರಕ್ಷಾ ಕೆಲವು ವರ್ಷಗಳ ಹಿಂದೆ ಕಿರಣ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ವೈಯಕ್ತಿಕ ವಿಚಾರಕ್ಕೆ ಜಗಳ ನಡೆದು ಬ್ರೇಕಪ್‌ ಆಗಿತ್ತು. ಈ ನಡುವೆ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ನಾಯರ್‌ ಎಂಬಾತನ ಪ್ರೀತಿಯ ಬಲೆಗೆ ಸುರಕ್ಷಾ ಸಿಲುಕಿದ್ದಳು. ಇಬ್ಬರೂ ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಜತೆಗೆ ವಾಸಿಸುತ್ತಿದ್ದರು. ಈ ವಿಚಾರ ತಿಳಿದು ಆಕ್ರೋಶಗೊಂಡ ಸುರಕ್ಷಾಳ ಮಾಜಿ ಪ್ರಿಯಕರ ಕಿರಣ್‌ ಆಗಾಗ ಸಮರ್ಥ್ ಜತೆ ಜಗಳ ಮಾಡುತ್ತಿದ್ದ. ಏ.7ರಂದು ತಡರಾತ್ರಿ 2 ಗಂಟೆಗೆ ಕಿರಣ್‌ ತನ್ನ ಸ್ನೇಹಿತರಾದ ಅರುಣ್‌ ಮತ್ತು ರಾಕೇಶ್‌ ಜತೆಗೆ ಸಮರ್ಥ್ ಮನೆಗೆ ನುಗ್ಗಿ ಆತನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದನ್ನು ತಡೆಯಲು ಬಂದ ಮಾಜಿ ಪ್ರೇಯಸಿ ಸುರಕ್ಷಾಗೂ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಇದನ್ನೂ ಓದಿ: ಮಂಗಳೂರು: ಚಲಾವಣೆಯಾಗದ 10 ರೂ. ನಾಣ್ಯ; ಹೊಸ ನೋಟೂ ಇಲ್ಲ

Advertisement

ಇತ್ತ ಸುರಕ್ಷಾ ಗಂಭೀರವಾಗಿ ಗಾಯಗೊಂಡ ಸಮರ್ಥ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಮೇ 9ರಂದು ರಾತ್ರಿ ಸಮರ್ಥ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ವಿಚಾರ ತಿಳಿದು ಆಸ್ಪತ್ರೆಗೆ ಧಾವಿಸಿದ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಸುರಕ್ಷಾ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳಾದ ಕಿರಣ್‌, ಅರುಣ್‌, ರಾಕೇಶ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next