Advertisement

ಜೋಗಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮ್ಮಾನ

03:45 AM Jul 04, 2017 | Team Udayavani |

ಮಹಾನಗರ: ಕದ್ರಿ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಮಂಗಳೂರು 2017ನೇ ಸಾಲಿನ ವಾರ್ಷಿಕೋತ್ಸವದಲ್ಲಿ  ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. 

Advertisement

ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಸಿ.ಎ. ಸ್ನಾತಕೋತ್ತರ ಪದವಿ ಪರೀಕ್ಷೆ ಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದ ಚೈತ್ರಾ ಬಿ.ಎಸ್‌., ಎಸೆಸೆಲ್ಸಿಯಲ್ಲಿ ಶೇ. 99.4 ಅಂಕ ಪಡೆದು ರಾಜ್ಯಕ್ಕೆ 5ನೇ ರ್‍ಯಾಂಕ್‌ ಗಳಿಸಿದ ಪಲ್ಲವಿ ನಾಗರಾಜ್‌, ಪಿ.ಯು.ಸಿ.ಯಲ್ಲಿ ಶೇ. 90ಕ್ಕಿಂತ ಅಂಕ ಗಳಿಸಿದ ಸಮೀಕ್ಷಾ, ಐಶ್ವರ್ಯಾ, ಗೌತಮಿ, ನಿತಿನ್‌ ರಾವ್‌ ಮತ್ತು ಅನುರಾಧಾ ಎಂ. ಹಾಗೂ ಎಸೆಸೆಲ್ಸಿಯಲ್ಲಿ ಶೇ. 90ಕ್ಕಿಂತ ಅಧಿ ಕ ಅಂಕಗಳಿಸಿದ ವೈಷ್ಣವಿ ಡಿ.ಕೆ., ಸುಜಾನ ವಿ.ಎಸ್‌. ಜೋಗಿ, ವರ್ಣ ಜೋಗಿ, ಹರ್ಷಿತಾ ವಿ.ಕೆ., ಭವ್ಯಾ ಬಿ., ಶೃತಿ ಕೆ. ಮತ್ತು ದೀಪಕ್‌ ಆರ್‌. ಅವರನ್ನು ಕಿರಣ್‌ ಕುಮಾರ್‌ ಜೋಗಿ ಅವರ ಅಧ್ಯಕ್ಷತೆಯಲ್ಲಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ಪಿ. ಕೇಶವನಾಥ್‌, ಕಾರ್ಯದರ್ಶಿ ಗಂಗಾಧರ್‌ ಬಿ., ಕೋಶಾ ಧಿಕಾರಿ ಎಚ್‌.ಕೆ. ಪುರುಷೋತ್ತವå, ಗೌರವ ಸಲಹೆಗಾರ ಎಂ. ರಾಮಚಂದ್ರ, ಕಾನೂನು ಸಲಹೆ ಗಾರ ಪ್ರೇಮನಾಥ್‌, ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ ಸಂಜೀವ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next