Advertisement

ಹಂದ್ವಾರ ಎನ್ ಕೌಂಟರ್ ಅಂತ್ಯ: ಇಬ್ಬರು ಉಗ್ರರ ದಮನ

10:18 AM Mar 03, 2019 | |

ಕಾಶ್ಮೀರ: ಹಂದ್ವಾರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಕ್ತಾಯವಾಗಿದ್ದು, ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿದೆ. ಶುಕ್ರವಾರದಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ನ ಮೂವರು ಯೋಧರು ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಹುತಾತ್ಮರಾಗಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಕಾಶ್ಮೀರದ ಐಜಿಪಿ ಎಸ್.ಪಿ.ಪನಿ ಅವರು, ಕಾರ್ಯಾಚರಣೆ ಬಹುತೇಕ ಮುಗಿದಿದೆ. ಕೊನೆಯ ಹಂತದ ಹುಡುಕಾಟ ಚಾಲ್ತಿಯಲ್ಲಿದೆ. ಹತರಾದ ಇಬ್ಬರು ಉಗ್ರರ ದೇಹಗಳನ್ನು ಗುರುತಿಸಲಾಗಿದೆ. ನಾವು ನಮ್ಮ ಸೇನೆಯ ಮೂವರು ಯೋಧರು ಮತ್ತು ಇಬ್ಬರು ಪೊಲೀಸರನ್ನು ಕಳೆದುಕೊಂಡಿದ್ದೇವೆ ಎಂದರು.

ಕಠಿಣ ಭೂಪ್ರದೇಶ ಮತ್ತು ಜನ ಸಂಖ್ಯಾ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ತಡವಾಯಿತು ಎಂದರು. ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಅವಿತಿದ್ದ ಉಗ್ರರನ್ನು ಕೊಲ್ಲಲು ಸುಮಾರು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next