Advertisement

ಕಾಶ್ಮೀರದ ಶೋಪಿಯಾನ್‌ನಲ್ಲಿ ಉಗ್ರರ ದಾಳಿ: ಕಾಶ್ಮೀರ ಪಂಡಿತನ ಮೇಲೆ ಫೈರಿಂಗ್

12:10 AM Apr 05, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡು ಹಾರಾಟ ನಡೆಸಿದ್ದಾರೆ. ಶೋಪಿಯಾನ್‌ ಜಿಲ್ಲೆಯ ಛೋಟಿಗಾಮ್‌ನಲ್ಲಿ ಬಾಲಕೃಷ್ಣ ಅಲಿಯಾಸ್‌ ಸೋನು (35) ಎಂಬುವರ ಮೇಲೆ ಗುಂಡು ಹಾರಿಸಲಾಗಿದೆ. ಅವರು ಸಣ್ಣ ಅಂಗಡಿ ಯೊಂದರ ಮಾಲಕರಾಗಿದ್ದಾರೆ. ಗಾಯ ಗೊಂಡ ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಯೋಧ ಹುತಾತ್ಮ: ಶ್ರೀನಗರದ ಮೈಸು ಮಾ ಎಂಬಲ್ಲಿ ಸಿಆರ್‌ಪಿಎಫ್ ಯೋಧ ರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ರೊಬ್ಬರು ಹುತಾತ್ಮರಾಗಿದ್ದಾರೆ. ಮತ್ತೂಬ್ಬರಿಗೆ ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳವನ್ನು ಸಿಆರ್‌ಪಿಫ್ ಯೋಧರು ಸುತ್ತುವರಿದಿದ್ದು ಶೋಧ ಕಾರ್ಯ ನಡೆಸಿದ್ದಾರೆ.

ಕಾರ್ಮಿಕರಿಗೆ ಗಾಯ: ಪುಲ್ವಾಮಾ ಜಿಲ್ಲೆಯಲ್ಲಿ ಬಿಹಾರದಿಂದ ಕೂಲಿ ಕೆಲಸ ಕ್ಕಾಗಿ ಬಂದಿದ್ದ ಇಬ್ಬರು ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಅವರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗು ತ್ತದೆ. ರವಿವಾರ ಪಂಜಾಬ್‌ನ ಕಾರ್ಮಿ ಕ ರಿಬ್ಬರು ಗುಂಡೇಟಿನಿಂದ ಗಾಯ ಗೊಂಡಿದ್ದರು.

ಇದನ್ನೂ ಓದಿ:ವಂಚನೆ ಪ್ರಕರಣ: ಮತ್ತೆ ಸುಕೇಶ್​ ಚಂದ್ರಶೇಖರ್ ಬಂಧನ

ಇನ್ನೊಂದೆಡೆ, ರಜೌರಿ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಎಲ್‌ಒಸಿ ಮೂಲಕ ಒಳನುಸುಳಲು ಪ್ರಯತ್ನ ಮಾಡಿದ ಪಾಕ್‌ ಪ್ರೇರಿತ ಉಗ್ರನನ್ನು ಸೇನಾ ಪಡೆಗಳು ಕೊಂದು ಹಾಕಿವೆ. ಈ ನಡುವೆ, ಮತ್ತೊಂದೆಡೆ, ಪೂಂಛ ಜಿಲ್ಲೆಯಲ್ಲಿ ಉಗ್ರರ ಅಡಗುತಾಣವನ್ನು ಸೇನಾ ಪಡೆ ಪತ್ತೆ ಮಾಡಿದೆ. ಈ ತಾಣ ಕೂಡ ಎಲ್‌ಒಸಿಗೆ ಹೊಂದಿಕೊಂಡಿದೆ. ಅಲ್ಲಿಂದ 2 ಎಕೆ -47 ರೈಫ‌ಲ್‌ಗ‌ಳು, 20 ಸುತ್ತಿನಷ್ಟು ಗುಂಡು ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next