Advertisement

ಉಗ್ರರ ಅಟ್ಟಹಾಸ:ನಾಲ್ವರು ಪೊಲೀಸರ ಅಪಹರಣ; ಮೂವರ ಬರ್ಬರ ಹತ್ಯೆ 

10:54 AM Sep 21, 2018 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಶುಕ್ರವಾರ ಅಟ್ಟಹಾಸ ಮೆರೆದಿದ್ದು , ನಾಲ್ವರು ಪೊಲೀಸರನ್ನು ಅಪಹರಿಸಿದ್ದು ಮೂವರನ್ನು ಹತ್ಯೆಗೈದಿದ್ದಾರೆ.

Advertisement

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಿಂದ ಗುರುವಾರ ರಾತ್ರಿ ಮೂವರು ವಿಶೇಷ ಪೊಲೀಸ್‌ ಅಧಿಕಾರಿಗಳು ಮತ್ತು ಓರ್ವ ಪೊಲೀಸ್‌ ಸಿಬಂದಿಯನ್ನು ಅಪಹರಿಸಿದ್ದರು. ಆ ಪೈಕಿ ಮೂವರು ಶವಗಳಾಗಿ ಪತ್ತೆಯಾಗಿದ್ದಾರೆ. ಇನ್ನೋರ್ವ ಅಧಿಕಾರಿ ನಾಪತ್ತೆಯಾಗಿದ್ದಾರೆ.

ಹಿಜ್‌ಬುಲ್‌ ಮುಜಾಹಿದ್ದೀನ್‌ ಉಗ್ರರು ಕೃತ್ಯ ಎಸಗಿದ್ದು , ಆಡಿಯೋವೊಂದನ್ನು ಬಿಡುಗಡೆ ಮಾಡಿ ಕಾಶ್ಮೀರದ ಎಲ್ಲಾ ವಿಶೇಷ ಪೊಲೀಸ್‌ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಧಮ್ಕಿ ಹಾಕಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next